ಹರ್ಷ ಕೊಲೆಯ ಬೆನ್ನಲ್ಲೇ ಮೂವರಿಗೆ ಕೊಲೆ ಬೆದರಿಕೆ!! ಒಂದು ತಿಂಗಳ ಒಳಗೆ ಬೀದಿ ಹೆಣವಾಗುತ್ತೀರಿ ಎಂದು ಸಾಮಾಜಿಕ ಜಾಲತಾಣದಲ್ಲಿ ವಾರ್ನಿಂಗ್

ದೇಶದೆಲ್ಲೆಡೆ ಕೋಲಾಹಲ ಎಬ್ಬಿಸಿದ ಶಿವಮೊಗ್ಗದ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆಯ ಬಳಿಕ ಮೂವರಿಗೆ ಕೊಲೆ ಬೆದರಿಕೆಗಳು ಬರಲಾರಾಂಭಿಸಿವೆ.

ಹಿಂದೂ ಕಾರ್ಯಕರ್ತ ಪುನೀತ್ ಕೆರೆಕಳ್ಳಿ ಎಂಬವರಿಗೆ ಸಾಮಾಜಿಕ ಜಾಲತಾಣದಲ್ಲಿ ಆಡಿಯೋ ಮೂಲಕ ಕೊಲೆ ಬೆದರಿಕೆ ಬಂದಿರುವ ಬಗ್ಗೆ ಸುದ್ದಿಯಾಗಿದ್ದು, ಹಿಜಾಬ್ ವಿಚಾರಕ್ಕೆ ಬಂದ ಎಲ್ಲರಿಗೂ ಇದೇ ಗತಿ ಎಂದು ಹೇಳಲಾಗಿದೆ.ಮೂವರ ಲಿಸ್ಟ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಇಬ್ಬರೂ ಸೇರಿದ್ದಾರೆ ಎನ್ನಲಾಗಿದೆ.

ಯಾವ ಸ್ಟೇಷನ್ ಗೆ ಬೇಕಿದ್ದರೂ ಹೋಗಿ ಕಂಪ್ಲೈಂಟ್ ಕೊಡು, ನಿಮಗೂ ಇದೇ ಗತಿ, ಬೀದಿ ಹೆಣವಾಗಿ ಹೋಗುತ್ತೀಯಾ ಎಂಬಂತೆಲ್ಲಾ ಆಡಿಯೋ ಮೆಸೇಜ್ ಗಳು ಬರಲಾರಾಂಭಿಸಿದ್ದು, ಒಂದು ತಿಂಗಳ ಒಳಗಾಗಿ ಮೂವರ ಹೆಣ ಬೀಳುವುದು ಖಚಿತ ಎಂದು ಹೇಳಲಾಗಿದ್ದು, ನಿನ್ನ ಫ್ರೆಂಡ್ಸ್ ಗಳಿಗೂ ಈ ವಾಯ್ಸ್ ನ್ನು ಕಳುಹಿಸು ಎಂದು ಹೇಳಲಾಗಿದೆಯಂತೆ.

ಮೆಸೇಜ್ ಮಾಡಿ ಮಾತನಾಡಿದ ವ್ಯಕ್ತಿ ಪದೇ ಪದೇ ನಿಮ್ಮನ್ನು ಕೊಲ್ಲುವುದು ಪಕ್ಕಾ ಎಂದು ಹೇಳಿದ್ದು, ಮೂವರ ಲಿಸ್ಟ್ ನಲ್ಲಿ ಪುತ್ತೂರಿನ ಇಬ್ಬರು ಹಿಂದೂ ಯುವಕರಿದ್ದು ಒಂದು ತಿಂಗಳ ಒಳಗಾಗಿ ನಿಮ್ಮನ್ನು ಮುಗಿಸುತ್ತೇವೆ ಎಂದು ವಾರ್ನ್ ಮಾಡಿದ್ದಾನೆ ಎನ್ನಲಾಗಿದೆ.

Leave A Reply

Your email address will not be published.