ಕಾಶ್ಮೀರ ವಿಚಾರದಲ್ಲಿ ಮೂಗು ತೂರಿಸಿದ ಹುಂಡೈ ಕಂಪನಿಗೆ ತನ್ನದೇ ಸ್ಟೈಲ್ ಅಲ್ಲಿ ತಿರುಗೇಟು ನೀಡಿದ ಕನ್ನಡಿಗ | ‘ಹುಂಡೈ ಕಂಪನಿ ಕಾರು ಓಡಿಸೋಕೆ ನನಗೆ ನಾಚಿಕೆ ಆಗ್ತಿದೆ’ ಎಂದು ಕಾರ್‌ಗೆ ಬೋರ್ಡ್

ವಿಜಯಪುರ : ಹುಂಡೈ ಕಂಪನಿ ಕಾಶ್ಮೀರ ವಿಚಾರದಲ್ಲಿ ಮೂಗು ತೂರಿಸಿದ ಕಾರಣಕ್ಕೆ ವಿಜಯಪುರದ ಯುವಕ ಅವರ ಕಂಪನಿಯ ಕಾರನ್ನೇ ವಿರೋಧಿಸುವ ಮೂಲಕ ಸೆಡ್ಡು ಹೊಡೆದಿದ್ದಾನೆ.

ದೇಶ ವಿರೋಧಿ ಟ್ವಿಟ್ ಮಾಡಿದ ಹುಂಡೈ ಕಂಪನಿ ವಿರುದ್ಧ ತನ್ನದೆ ಶೈಲಿಯಲ್ಲಿ ಯುವಕ ಸಂತೋಷ್ ಚೌಧರಿ ಆಕ್ರೋಶ ವ್ಯಕ್ತಪಡಿಸಿದ್ದಾನೆ.ಕಾರಿನ ಮೇಲೆ ಇದೊಂದು ದೇಶ ವಿರೋಧಿ ಕಂಪನಿ, ಜೈಹಿಂದ್ ಎಂದು ಬರೆಯಲಾಗಿದೆ. ‘ಹುಂಡೈ ಕಂಪನಿ ಕಾರು ಓಡಿಸೋಕೆ ನನಗೆ ನಾಚಿಕೆ ಆಗ್ತಿದೆ’ ಎಂದು ಕಾರ್‌ಗೆ ಬೋರ್ಡ್ ಹಾಕಿ, ಕಾರಿನ ಲೋಗೋಗಳಿಗೂ ಕಪ್ಪು ಪಟ್ಟಿ ಅಂಟಿಸಿ ಆಕ್ರೋಶ ಹೊರಹಾಕಿದ್ದಾನೆ.

Leave A Reply

Your email address will not be published.