ಹಿಜಾಬ್ ವಿವಾದ : “ಮುಸ್ಲಿಂಮರ ವಿರುದ್ಧ ಮೆರೆದಾಡಿದರೆ ಹುಷಾರ್” ಇಂಟರ್ನೆಟ್ ಮೂಲಕ ರಘುಪತಿ ಭಟ್ ಗೆ ಜೀವ ಬೆದರಿಕೆ!

ಹಿಜಾಬ್ ವಿವಾದದ ಕಾರಣದಿಂದಾಗಿ ಉಡುಪಿ ಬಿಜೆಪಿ ಶಾಸಕ ರಘುಪತಿ ಭಟ್ ಅವರಿಗೆ ಇಂಟರ್ನೆಟ್ ಮೂಲಕ ಜೀವಬೆದರಿಕೆ ಬಂದಿದೆ. ಹೀಗಾಗಿ ರಘುಪತಿ ಭಟ್ ಅವರು ಗೃಹ ಸಚಿವರಿಗೆ ದೂರು ನೀಡಿದ್ದಾರೆ. ಇಂಟರ್ನೆಟ್ ಮೂಲಕ ಜೀವ ಬೆದರಿಕೆ ಬಂದಿದ್ದು,’ ಮುಸ್ಲಿಂರ ವಿರುದ್ಧ ಮೆರೆದಾಡಬೇಡ. ನಿನ್ನನ್ನು ಹೇಗೆ ಮಟ್ಟ ಹಾಕಬೇಕು ಅಂತ ಗೊತ್ತಿದೆ. ನಿನ್ನನ್ನು ನೋಡಿಕೊಳ್ಳುತ್ತೇವೆ’ ಎಂದೆಲ್ಲಾ ಜೀವಬೆದರಿಕೆ ಹಾಕಲಾಗಿದೆ ಎಂದು ಭಟ್ ಹೇಳಿದ್ದಾರೆ.

ಜೀವ ಬೆದರಿಕೆ ಬಂದಿರುವ ಕಾರಣ ಶಾಸಕ ರಘುಪತಿ ಭಟ್ ಅವರಿಗೆ ಗನ್ ಮ್ಯಾನ್ ನೀಡಲು ಪೊಲೀಸ್ ಇಲಾಖೆ ನಿರ್ಧರಿಸಿದೆ. ಆದರೆ ಗನ್ ಮ್ಯಾನ್ ಬೇಡ, ನನ್ನ ಜೊತೆ ಜನರಿರುವಾಗ ಹೆದರಿಕೆ ಇಲ್ಲ ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.

Leave A Reply

Your email address will not be published.