ಸುರತ್ಕಲ್: ಟೋಲ್ ಗೇಟ್ ವಿರುದ್ಧ ವಿಶೇಷ ಪ್ರತಿಭಟನೆ!! ಕೆಸರಿನಲ್ಲಿ ಕುಳಿತು ಏಕಾಂಗಿ ಹೋರಾಟ ನಡೆಸುತ್ತಿರುವ ಆಸೀಫ್ ಆಪದ್ಭಾಂಧವ

ಸುರತ್ಕಲ್: ಇಲ್ಲಿನ ರಾಷ್ಟೀಯ ಹೆದ್ದಾರಿ 66 ರ ಸುರತ್ಕಲ್ ಬಳಿ ಹೆದ್ದಾರಿ ಟೋಲ್ ಗೇಟ್ ವಿರುದ್ಧ ಈ ಮೊದಲಿನಿಂದಲೂ ಪ್ರತಿಭಟನೆ ನಡೆಯುತ್ತಿದ್ದು, ಈ ಬಾರಿ ಏಕಾಂಗಿಯಾಗಿ ವಿಶೇಷ ಪ್ರತಿಭಟನೆ ನಡೆಯುತ್ತಿದೆ.

ಹೌದು, ಸುರತ್ಕಲ್ ಟೋಲ್ ಗೇಟ್ ಬಳಿಯಲ್ಲೇ ರಸ್ತೆ ಬದಿ ಗುಂಡಿಯೊಂದನ್ನು ತೋಡಿ ಅದರಲ್ಲಿ ಕೆಸರು ತುಂಬಿಸಿ ಕೆಸರಿನಲ್ಲಿ ಕುಳಿತುಕೊಂಡು ಆಪದ್ಭಾಂಧವ ಆಸೀಫ್ ಎನ್ನುವವರು ಹೋರಾಟ ನಡೆಸುತ್ತಿದ್ದಾರೆ.

ಇನ್ನು ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ದೀಪು ಶೆಟ್ಟಿಗಾರ್ ಆಕ್ರೋಶ ವ್ಯಕ್ತಪಡಿಸಿದ್ದು,ಜಿಲ್ಲೆಯ ಘನವೆತ್ತ ರಾಜಕಾರಣಿಗಳಿಗೆ,ಅಧಿಕಾರಿ ವರ್ಗದವರಿಗೆ ಈ ಹೋರಾಟ ಬಗ್ಗೆ ಕನಿಕರ ಇಲ್ಲ,ಏಕಾಂಗಿ ಹೋರಾಟ ನಡೆಯುತ್ತಿದ್ದರೂ ಯಾರೊಬ್ಬರೂ ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ.

Leave A Reply

Your email address will not be published.