ಡಾ. ರಾಜಕುಮಾರ್ ಕಂಚಿನ ಪುತ್ಥಳಿಯ ಮೇಲೆ ಕಳ್ಳರ ಕಣ್ಣು!! ಉದ್ಯಾನವನದಲ್ಲಿದ್ದ ಪ್ರತಿಮೆಯನ್ನು ಕಳ್ಳತನಗೈದ ಬಗ್ಗೆ ಪ್ರಕರಣ ದಾಖಲು-ಶಂಕಿತರು ವಶಕ್ಕೆ

ಬೆಂಗಳೂರು:ನಗರದ ಲುಂಬಿನಿ ಗಾರ್ಡನ್ ನಲ್ಲಿ ಸ್ಥಾಪಿಸಲಾಗಿದ್ದ ವರನಟ, ಡಾ. ರಾಜಕುಮಾರ್ ಅವರ ಪುತ್ಥಳಿಯನ್ನು ಕಳ್ಳರು ಎಗರಿಸಿದ್ದಾರೆ.

ಡಾ. ರಾಜ್ ಅವರ ನೆನಪಿಗಾಗಿ ಸ್ಥಾಪಿಸಲಾಗಿದ್ದ ಕಂಚಿನ ಪುತ್ಥಳಿ ಕಳ್ಳತನದ ಬಗ್ಗೆ ಅರಣ್ಯಾಧಿಕಾರಿಯೊಬ್ಬರು ಪೊಲೀಸರಿಗೆ ದೂರು ಸಲ್ಲಿಸಿದ್ದರು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರು ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

Leave A Reply

Your email address will not be published.