ಶಿರಸಿ: ಉಪನ್ಯಾಸಕ ಹುದ್ದೆ ಕೊಡಿಸುವ ಆಮಿಷವೊಡ್ಡಿ ಯುವಕನಿಗೆ ಬ್ಲಾಕ್ ಮೇಲ್!!! ಮಹಿಳೆಯೊಂದಿಗೆ ಬೆತ್ತಲೆಯಾಗಿರುವ ವೀಡಿಯೋ ಮುಂದಿಟ್ಟು 15 ಲಕ್ಷಕ್ಕೆ ಡಿಮ್ಯಾಂಡ್

ಶಿರಸಿ: ಉಪನ್ಯಾಸಕ ಹುದ್ದೆ ಕೊಡಿಸುವ ಆಮಿಷವೊಡ್ಡಿ ಮಹಿಳೆಯೊಂದಿಗೆ ಬೆತ್ತಲೆಯಾಗಿರುವ ದೃಶ್ಯಗಳನ್ನು ಸೆರೆಹಿಡಿದು 15 ಲಕ್ಷ ಹಣಕ್ಕೆ ಬೇಡಿಕೆ ಇಟ್ಟು ಬ್ಲಾಕ್ ಮೇಲ್ ಮಾಡಿದ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಈ ಸಂಬಂಧ ಓರ್ವ ಮಹಿಳೆ ಸಹಿತ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ತಾಲೂಕಿನ ಕೆರೆಜಡ್ಡಿಯ ಅಜಿತ್ ಶ್ರೀಕಾಂತ್ ನಾಡಿಗ,ಗೊಳಗೇರಿ ಓಣಿಯ ಧನುಷ್ಯ ಕುಮಾರ್ ದಿಲೀಪ ಕುಮಾರ್ ಶೆಟ್ಟಿ ಹಾಗೂ ಪದ್ಮಜಾ ಡಿ.ಎನ್ ಎಂದು ಗುರುತಿಸಲಾಗಿದೆ.

ಘಟನೆ ವಿವರ: ಮೂವರು ಆರೋಪಿಗಳು ಸೇರಿಕೊಂಡು ಉಪನ್ಯಾಸಕ ಹುದ್ದೆಗೆ ಸೇರಬೇಕೆಂದು ಬಯಸಿದ್ದ ಯುವಕನೋರ್ವನನ್ನು ಹುದ್ದೆ ಕೊಡಿಸುವ ಆಮಿಷ ಒಡ್ಡಿ ಶಿವಮೊಗ್ಗದ ಲಾಡ್ಜ್ ಒಂದಕ್ಕೆ ಕರೆಸಿಕೊಂಡಿದ್ದರು.ಅಲ್ಲಿ ಯುವಕನನ್ನು ಬೆತ್ತಲೆಗೊಳಿಸಿ ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಒತ್ತಾಯಿಸಿದ್ದು, ಈ ಖಾಸಗಿ ಕ್ಷಣಗಳನ್ನು ಚಿತ್ರೀಕರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು.

ಈ ಬಗ್ಗೆ ಸಂತ್ರಸ್ತ ಯುವಕ ಪೊಲೀಸರ ಮೊರೆ ಹೋಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಮೂವರನ್ನು ಬಂಧಿಸಿದ್ದು, ಇನ್ನೊರ್ವ ಆರೋಪಿಯ ಪತ್ತೆಗೆ ಬಲೆ ಬೀಸಲಾಗಿದೆ.

Leave A Reply

Your email address will not be published.