ಬೆಂಕಿನಾಥೇಶ್ವರ ಮೇಳದ ಖ್ಯಾತ ಯಕ್ಷಗಾನ ಕಲಾವಿದ, ಸ್ತ್ರೀ ಪಾತ್ರಧಾರಿ ಸುರೇಶ್ ಶೆಟ್ಟಿ ನಿಧನ!!

ಬೆಂಕಿನಾಥೇಶ್ವರ ಮೇಳದ ಖ್ಯಾತ ಸ್ತ್ರೀವೇಷಧಾರಿ ಸುರೇಶ್ ಯೆಯ್ಯಾಡಿಯವರು ನಿನ್ನೆ ರಾತ್ರಿ ವಿಧಿವಶರಾದರು. ಯಕ್ಷಗಾನ ಮಾತ್ರವಲ್ಲದೇ ಹಲವಾರು ಟ್ಯಾಬ್ಲೋಗಳಲ್ಲಿ ಸ್ತ್ರೀ ವೇಷ ಹಾಕಿ ಜನರ ಮನಸ್ಸನ್ನು ಗೆದ್ದ ಏಯ್ಯಾಡಿಯ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದರು.

ಸಮಾಜದ ಬಗ್ಗೆ ಸಮಸ್ಯೆಯ ಬಗ್ಗೆ ಹಲವು ಚಿಂತನೆಗಳನ್ನು ಹೊಂದಿದ ವ್ಯಕ್ತಿಯಾಗಿದ್ದರು. ಯಕ್ಷಗಾನವನ್ನು ತನ್ನ ಪ್ರಾಣಕ್ಕಿಂತಲೂ ಹೆಚ್ಚು ಆರಾಧಿಸುತ್ತಿದ್ದ ವ್ಯಕ್ತಿ ಹಾಗೆಯೇ ಯಕ್ಷಗಾನವೇ ನನ್ನ ಬದುಕು ಎಂದು ನಂಬಿದ್ದ ವ್ಯಕ್ತಿ ದಿಢೀರ್ ಸಾವು ಅವರ ಅಭಿಮಾನಿಗಳಲ್ಲಿ ಆಘಾತ ಮೂಡಿಸಿದೆ.

Leave A Reply

Your email address will not be published.