ಐವರ್ನಾಡಿನಲ್ಲಿ ಎಸ್.ಕೆ ವೆಜಿಟೇಬಲ್ಸ್-ಫ್ರೂಟ್ಸ್, ಸ್ಟೇಜ್ ಡೆಕೋರೇಷನ್ ಹಾಗೂ ಅರ್ಥ್ ಮೂವರ್ಸ್ ಶುಭಾರಂಭ!!

ಶೈಲೇಶ್ ಅಲ್ಪೆ ಹಾಗೂ ವಿಘ್ಣೇಶ್ ಬಲ್ಲೇರಿ ಮಾಲೀಕತ್ವದ ನೂತನ ಎಸ್.ಕೆ ವೆಜಿಟೇಬಲ್, ಫ್ರುಟ್ಸ್, ಸ್ಟೇಜ್ ಡೆಕೋರೇಷನ್ ಹಾಗೂ ಅರ್ಥ್ ಮೂವರ್ಸ್ ಇಂದು ಗಣಪತಿ ಹೋಮದೊಂದಿಗೆ ಐವರ್ನಾಡಿನ ನಿಡುಬೆ ದೇವಿಕೃಪಾ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿತು.

ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಕೀಲಾಡಿ ದೀಪ ಬೆಳಗಿ ಉದ್ಘಾಟಿಸಿ ಶುಭ ಹಾರೈಸಿದರು. ಅತಿಥಿಗಳಾಗಿ ಪಂಚಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶ್ರೀನಿವಾಸ ಮಡ್ತಿಲ, ಕಟ್ಟಡ ಮಾಲೀಕ ತಿರುಮಲೆಶ್ವರ ಪೂಜಾರಿಮನೆ, ಮಸೀದಿ ಧರ್ಮಗುರು ಅಬ್ದುಲ್ ಖಾದರ್, ಕರುಣಾಕರ ಕಟ್ಟತ್ತಾರು, ಹುಕ್ರಪ್ಪ ಗೌಡ, ಮತ್ತಿತರರು ಉಪಸ್ಥಿತರಿದ್ದರು.

ಮಾಲಕರಾದ ಶೈಲೇಶ್ ಸ್ವಾಗತಿಸಿ, ವಿಘ್ಣೇಶ್ ಬಲ್ಲೇರಿ ವಂದಿಸಿದರು.

Leave A Reply

Your email address will not be published.