ರಾಜಾರೋಷವಾಗಿ ಕಾಲೇಜಿಗೆ ಎಂಟ್ರಿ ಕೊಟ್ಟ ಚಿರತೆ !! |
ಹಾಡುಹಗಲೇ ವಿದ್ಯಾರ್ಥಿಯ ಮೇಲೆ ದಾಳಿ, ಹೆದರಿ ಕಾಲೇಜಿಗೆ ಕಾಲಿಡುತ್ತಿಲ್ಲ ವಿದ್ಯಾರ್ಥಿಗಳು

Share the Article

ಕಾಡು ಪ್ರಾಣಿಗಳು ಇತ್ತೀಚಿಗೆ ನಾಡಿಗೆ ಬರುತ್ತಿರುವುದು ಮಾಮೂಲಾಗಿ ಹೋಗಿದೆ. ಅದೆಷ್ಟೋ ಪ್ರದೇಶಗಳಲ್ಲಿ ಅವುಗಳು ಓಡಾಡುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಹಾಗೆಯೇ ಇಲ್ಲಿ ಕಾಡಿನಿಂದ ನಾಡಿಗೆ ಬಂದ ಚಿರತೆಯೊಂದು ನೇರವಾಗಿ ಕಾಲೇಜಿಗೆ ನುಗ್ಗಿದೆ. ಆಲಿಘಡ್ ಸಮೀಪ ಚಾ ಎಂಬಲ್ಲಿ ಈ ಘಟನೆ ನಡೆದಿದೆ.

ಹಾಡುಹಗಲೇ ಕಾಲೇಜಿಗೆ ನುಗ್ಗಿದ ಚಿರತೆ ದಾಳಿಗೆ ವಿದ್ಯಾರ್ಥಿಯೊಬ್ಬ ಗಾಯಗೊಂಡಿದ್ದಾನೆ. ಚಿರತೆ ರಾಜಾರೋಷವಾಗಿ ಕಾಲೇಜಿಗೆ ಎಂಟ್ರಿ ಕೊಟ್ಟ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಗಾಯಗೊಂಡ ವಿದ್ಯಾರ್ಥಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇದೀಗ ಆತ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ತಿಳಿದುಬಂದಿದೆ.

ವಿದ್ಯಾರ್ಥಿಗೆ ಗಾಯಗೊಳಿಸಿದ ಚಿರತೆಯು ಉಳಿದ ವಿದ್ಯಾರ್ಥಿಗಳ ಕೂಗಾಟಕ್ಕೆ ಹೆದರಿ ಅಲ್ಲಿಂದ ಕಾಲ್ಕಿತ್ತಿದೆ. ಚಿರತೆ ದಾಳಿ ಬಳಿಕ ವಿದ್ಯಾರ್ಥಿಗಳಲ್ಲಿ ಭಯ ಬೀಡುಬಿಟ್ಟಿದೆ. ಕಾಲೇಜಿಗೆ ಹಾಜರಾಗಲು ಹಿಂಜರಿಯುತ್ತಿದ್ದಾರೆ ಎಂದು ವರದಿಯಾಗಿದೆ.

Leave A Reply

Your email address will not be published.