ರಾವಣ ವಿಶ್ವದ ಮೊದಲ ಪೈಲಟ್ ಅಂತೆ | ಕುತೂಹಲಕಾರಿಯಾಗಿದೆ ಶ್ರೀಲಂಕಾ ಕೈಗೊಂಡ ಅಂತಾರಾಷ್ಟ್ರೀಯ’ವಿಮಾನ’ ಪೈಲಟ್ ರಾವಣನ ಬಗೆಗಿನ ಸಂಶೋಧನೆ

ನವದೆಹಲಿ: ಶ್ರೀಲಂಕಾ ಈಗ ವಿಮಾನಗಳ ಬಗ್ಗೆ ತನ್ನ ಸುವರ್ಣ ಗತಕಾಲಕ್ಕೆ ಸಂಬಂಧಿಸಿದ ಪುರಾಣಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದು ಇದೀಗ ವ್ಯಾಪಕ ಸಂಶೋಧನೆ ಮಾಡಲು ತಯಾರಿ ನಡೆಸುತ್ತಿದೆ. 

ಶ್ರೀಲಂಕಾ ಜನರ ನಂಬಿಕೆ ಏನೆಂದರೆ ರಾಮಾಯಣದ ವಿಲನ್ ರಾವಣ ವಿಶ್ವದ ಮೊದಲ ಪೈಲಟ್ ಅಂತೆ !ವಾಸ್ತವವಾಗಿ, ಹೆಚ್ಚಿನ ಸಂಖ್ಯೆಯ ಶ್ರೀಲಂಕಾದವರು ರಾವಣ ವಿಶ್ವದ ಮೊದಲ ಪೈಲಟ್ ಎಂದು ನಂಬುತ್ತಾರೆ. ರಾವಣನ ಕಾಲದಲ್ಲಿ ಶ್ರೀಲಂಕಾದಲ್ಲಿ ವಿಮಾನಗಳು ಮತ್ತು ವಿಮಾನ ನಿಲ್ದಾಣಗಳು ಇದ್ದವು. ಇದನ್ನು ಪುರಾಣ ಎಂದು ಒಪ್ಪಿಕೊಳ್ಳಲು ಅಲ್ಲಿನ ಜನತೆ ನಿರಾಕರಿಸಿದ ಹಿನ್ನೆಲೆಯಲ್ಲಿ ಅನೇಕ ಜನರು ವೈಯಕ್ತಿಕ ಮಟ್ಟದಲ್ಲಿ ಸಂಶೋಧನೆಯನ್ನೂ ನಡೆಸಿದ್ದಾರೆ.

ರಾವಣನನ್ನು ವಿಶ್ವದ ಮೊದಲ ಪೈಲೆಟ್ ಎಂದು ಗುರುತಿಸಿದ್ದು ಇದೀಗ ಜನರಲ್ಲಿ ತೀವ್ರ ಕುತೂಹಲವನ್ನು ಹುಟ್ಟು ಹಾಕಿದೆ. ರಾಮಾಯಣದಲ್ಲಿ ಅಂದು ಪುಷ್ಪಕ ಅಭಿಮಾನವನ್ನು ಓಡಿಸಿದ್ದು ರಾವಣ. ಅವತ್ತಿನ ವಿಮಾನ ಇಂದಿನ ಏರೋಪ್ಲೇನ್ ನಂತೆ ಇತ್ತಾ, ಅಥವಾ ಅದು ಬಲೂನ್ ಥರದ ತೇಲುವ ಯಂತ್ರವೇ ?! ಮುಂತಾದ ವಿಷಯಗಳಿಂದ ಇಮ್ಮಡಿಯಾಗಿದೆ ಶ್ರೀಲಂಕಾ ಕೈಗೊಂಡ ಸಂಶೋಧನೆ.

ಎರಡು ವರ್ಷಗಳ ಹಿಂದೆ ಕೊಲಂಬೊದಲ್ಲಿ ನಡೆದಿದ್ದ ನಾಗರಿಕ ವಿಮಾನಯಾನ ತಜ್ಞರು, ಇತಿಹಾಸಕಾರರು, ಪುರಾತತ್ವ ಶಾಸ್ತ್ರಜ್ಞರು ಮತ್ತು ವಿಜ್ಞಾನಿಗಳ ಸಮ್ಮೇಳನದಲ್ಲಿ ಈ ಕಲ್ಪನೆಯನ್ನು ಬಲಪಡಿಸಲಾಯಿತು. ರಾವಣ ವಿಶ್ವದಲ್ಲಿಯೇ ಪ್ರಥಮ ಬಾರಿಗೆ ವಿಮಾನ ಹಾರಿಸಿದ್ದಾನೆ ಎಂದು ಸಮ್ಮೇಳನದಲ್ಲಿ ಒಪ್ಪಿಗೆ ಸೂಚಿಸಲಾಗಿತ್ತು. ಈ ವಿಮಾನ ಶ್ರೀಲಂಕಾದಿಂದ ಭಾರತಕ್ಕೆ ಮತ್ತು ನಂತರ ಅಲ್ಲಿಂದ ತಿರುಗಿ ಮತ್ತೆ ರಾವಣನು ವಿಮಾನದ ಮೂಲಕ ಶ್ರೀಲಂಕಾಕ್ಕೆ ಹಿಂದಿರುಗಿದನು ಎಂದು ಈಗಲೂ ನಂಬುತ್ತಾರೆ.

ಸಮ್ಮೇಳನದ ನಂತರ ಅಂದಿನ ಶ್ರೀಲಂಕಾ ಸರ್ಕಾರ 50 ಲಕ್ಷ ಅನುದಾನ ಬಿಡುಗಡೆ ಮಾಡಿದ್ದರಿಂದ ಸಂಶೋಧನೆ ಆರಂಭಿಸಲಾಗಿತ್ತು. ಶ್ರೀಲಂಕಾದ ನಾಗರಿಕ ವಿಮಾನಯಾನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶಶಿ ದಾನತುಂಗೆ ಮಾತನಾಡಿ “ಕೊರೋನಾ ಲಾಕ್‌ಡೌನ್‌ನಿಂದ ಸಂಶೋಧನೆಯನ್ನು ನಿಲ್ಲಿಸಬೇಕಾಯಿತು. ರಾಜಪಕ್ಷೆ ಸರ್ಕಾರವೂ ಈ ಸಂಶೋಧನೆಯ ಪರವಾಗಿದ್ದು, ಸಂಶೋಧನೆ ಪುನರಾರಂಭಿಸಲು ಸರ್ಕಾರ ಮುಂದಾಗಿದೆ. ಮುಂದಿನ ವರ್ಷದ ಆರಂಭದಲ್ಲಿ ಈ ಸಂಶೋಧನೆಯನ್ನು ಮತ್ತೆ ಪ್ರಾರಂಭಿಸಬಹುದು ಎಂದರು.

ಇತಿಹಾಸದಲ್ಲಿ ಆಸಕ್ತಿ ಹೊಂದಿರುವ ಶಶಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಅಧ್ಯಕ್ಷರೂ ಆಗಿದ್ದಾರೆ. ತಮ್ಮ ದೇಶದ ನಾಗರಿಕ ವಿಮಾನಯಾನದ ಇತಿಹಾಸವನ್ನು ತಿಳಿದುಕೊಳ್ಳಲು ಸಾಕಷ್ಟು ಪ್ರಯಾಣಿಸಿದ್ದಾರೆ. “ರಾವಣನು ಪೌರಾಣಿಕ ಪಾತ್ರವಲ್ಲ ಎಂದು ನನಗೆ ಸಂಪೂರ್ಣವಾಗಿ ಖಚಿತವಾಗಿದೆ.

ರಾವಣ ನಿಜವಾದ ರಾಜನಾಗಿದ್ದನು. ವಾಸ್ತವವಾಗಿ ವಿಮಾನಗಳು ಮತ್ತು ವಿಮಾನ ನಿಲ್ದಾಣಗಳನ್ನು ಹೊಂದಿದ್ದನು.ಅವು ಇಂದಿನಂತೆ ವಿಮಾನಗಳಲ್ಲದಿರುವ ಸಾಧ್ಯತೆಯಿದೆ. ನಿಸ್ಸಂಶಯವಾಗಿ, ಪ್ರಾಚೀನ ಕಾಲದಲ್ಲಿ, ಶ್ರೀಲಂಕಾ ಮತ್ತು ಭಾರತೀಯ ಜನರು ಸುಧಾರಿತ ತಂತ್ರಜ್ಞಾನವನ್ನು ಹೊಂದಿದ್ದರು.  ಇದಕ್ಕಾಗಿ ವಿಸ್ತೃತ ಸಂಶೋಧನೆ ನಡೆಸಬೇಕು’ ಎಂದು ಶಶಿ ಭಾರತವನ್ನೂ ಈ ಸಂಶೋಧನೆಯ ಭಾಗವಾಗುವಂತೆ ಕೋರಿದ್ದಾರೆ.ಎರಡೂ ದೇಶಗಳ ಪ್ರಾಚೀನ ವೈಭವದ ದೃಷ್ಟಿಯಿಂದ ಈ ಸಂಶೋಧನೆ ಮಹತ್ವದ್ದಾಗಿದೆ ಎಂದಿದ್ದಾರೆ.

Leave A Reply

Your email address will not be published.