ಬೆಳ್ತಂಗಡಿ | ನಸುಕಿನ ಜಾವ ಕಟ್ಟೆ ಇಲ್ಲದ ಬಾವಿಗೆ ಬಿದ್ದ ದನ, ಯಶಸ್ವಿ ಕಾರ್ಯಾಚರಣೆಯ ಮೂಲಕ ದನದ ರಕ್ಷಣೆ

ಬೆಳ್ತಂಗಡಿ : ಮುಂಜಾನೆ ವೇಳೆ ಹಟ್ಟಿಯಿಂದ ಹೊರ ಬಂದ ದನ ಮನೆಯ ಕಟ್ಟೆ ಇಲ್ಲದ ಬಾವಿಗೆ ಬಿದ್ದಿದ್ದು, ತಕ್ಷಣ ಅದನ್ನು ಯಶಸ್ವಿಯಾಗಿ ರಕ್ಷಿಸಿದ ಘಟನೆ ಕುವೆಟ್ಟು ಗ್ರಾಮದಲ್ಲಿ ನಡೆದಿದೆ.

ಕುವೆಟ್ಟು ಗ್ರಾಮ ಬರಾಯಪಲ್ಕೆ ಅಬ್ಬಾಸ್ ಎಂಬವರ ಮನೆಯ ದನವನ್ನು, ಬೆಳಗಿನ ಜಾವ ಸುಮಾರು 5 ಗಂಟೆಗೆ ಹಟ್ಟಿಯಿಂದ ಬಿಟ್ಟಾಗ ಅವರದ್ದೇ ಮನೆಯ ಕಟ್ಟೆ ಇಲ್ಲದ ಬಾವಿಗೆ ಬಿದ್ದಿದೆ.

ತಕ್ಷಣ ಮಾಹಿತಿ ಪಡೆದು ಕಾರ್ಯ ಪ್ರವೃತ್ತರಾದ ಬೆಳ್ತಂಗಡಿ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ದನವನ್ನು ಮೇಲಕ್ಕೆತ್ತಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

Leave A Reply

Your email address will not be published.