ದರ್ಶನ್-ಇಂದ್ರಜಿತ್ ಜಟಾಪಟಿ | ಆಣೆ ಪ್ರಮಾಣಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಬನ್ನಿ | ದರ್ಶನ್‌ಗೆ ಇಂದ್ರಜಿತ್ ಸವಾಲು

ನಟ ದರ್ಶನ್ ಹಾಗೂ ಇಂದ್ರಜಿತ್ ಲಂಕೇಶ್ ಅವರ ಜಟಾಪಟಿ ವಿಚಾರಕ್ಕೆ ಸಂಬಂಧಿಸಿದಂತೆ ಈಗ ಅದು ಧರ್ಮಸ್ಥಳಕ್ಕೂ ತಲುಪಿದೆ.

ನನಗೂ ಸಂಸ್ಕಾರ ಸಂಸ್ಕೃತಿ ಇದೆ. ದರ್ಶನ್‌ ವಿಚಲಿತರಾಗಿದ್ದಾರೆ. ನೀವು ನಿಮ್ಮ ತಂದೆಗೆ ಹುಟ್ಟಿದ್ದರೆ ಧರ್ಮಸ್ಥಳಕ್ಕೆ ಬನ್ನಿ. ಅಲ್ಲಿಯೇ ಆಣೆ ಪ್ರಮಾಣ ಮಾಡೋಣಾ ಎಂದು ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ನಟ ದರ್ಶನ್‌ ತೂಗುದೀಪ್‌ ಅವರಿಗೆ ಪ್ರತಿ ಸವಾಲು ಹಾಕಿದ್ದಾರೆ.

ಬೆಂಗಳೂರಲ್ಲಿಂದು ಸುದ್ದಿಗೋಷ್ಠಿ ನಡೆಸಿದ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌, ನಟ ದರ್ಶನ್‌ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಸ್ಕಾರ, ಸಂಸ್ಕೃತಿ, ಹಿನ್ನೆಲೆ ಭಾಷೆಯಲ್ಲಿ ತೋರಿಸುತ್ತದೆ. ನಟ ದರ್ಶನ್‌ ನಾನು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ್ರೆ ಸಾಕು. ನಾನು ಸೆಲೆಬ್ರಿಟಿಗಳು ಸಮಾಜಕ್ಕೆ ಮಾದರಿಯಾಗಬೇಕು ಎಂದಿದ್ದೇನೆ. ಆದ್ರೆ ಅನ್‌ಎಜುಕೇಟೆಡ್‌ ಅಂತ ಹೇಳಿಲ್ಲ ಎಂದಿದ್ದಾರೆ.

ಡಾ. ರಾಜ್‌ ಕುಮಾರ್‌ ಅವರು ಅಭಿಮಾನಿಗಳು ದೇವರು ಎಂದಿದ್ದಾರೆ. ಅಭಿಮಾನಿಗಳಲ್ಲಿ ಸಪ್ಲೈಯರ್‌ ಗಳು, ಬಡವರು ಇದ್ದಾರೆ. ಹೀಗಿದ್ದಾಗ ನೀವು ಸಪ್ಲೈಯರ್‌ ಮೇಲೆ ಹೊಡೆದಿರುವುದು ಎಷ್ಟು ಸರಿ. ಮಹಿಳೆಯ ವಿರುದ್ದ ದೂರು ನೀಡಿದ್ರೆ ಮಹಿಳೆಯನ್ನು ಠಾಣೆಗೆ ಕರೆಯಿಸಿ ವಿಚಾರಣೆ ಮಾಡ್ತೀರಿ. ಆದ್ರೆ ನಟನ ವಿರುದ್ದ ದೂರು ನೀಡಿದ್ರೆ ಯಾಕೆ ಕ್ರಮಕೈಗೊಳ್ಳಲಿಲ್ಲ ಎಂದು ಪ್ರಶ್ನಿಸಿದ್ದಾರೆ.

Leave A Reply

Your email address will not be published.