ಜೊತೆಜೊತೆಯಲಿ ಧಾರವಾಹಿಯಿಂದ ಹೊರನಡೆದರಾ ಮೇಘ ಶೆಟ್ಟಿ?..ನೆಚ್ಚಿನ ನಾಯಕಿಯ ಈ ನಡೆಗೆ ಬೇಸರಿಸುತ್ತಿದೆ ಪ್ರೇಕ್ಷಕ ಸಮೂಹ!

ಕನ್ನಡ ಕಿರುತೆರೆಯ ಧಾರವಾಹಿಗಳಲ್ಲಿ ಒಂದು ವಿಭಿನ್ನ ಶೈಲಿಯ ಮೂಲಕ,ಅನೇಕ ಪ್ರೇಕ್ಷಕರನ್ನು ತನ್ನತ್ತ ಸೆಳೆದು ತನ್ನದೇ ಆದ ಹೊಸ ಕ್ರೇಜ್ ಹುಟ್ಟು ಹಾಕಿದ ಧಾರವಾಹಿ ಜೊತೆಜೊತೆಯಲಿ.ಸಂಜೆಯಾಗುತ್ತಲೇ ಯುವತಿಯರಿಂದ ಹಿಡಿದು ಮನೆ ಮಂದಿಯೆಲ್ಲಾ ಒಟ್ಟಾಗಿ ಕುಳಿತು ನೋಡುವ ಸೀರಿಯಲ್ನ ನಿಮ್ಮ ನೆಚ್ಚಿನ ನಾಯಕಿ ಇನ್ನು ಪಾತ್ರದಲ್ಲಿ ಮುಂದುವರಿಯುವುದಿಲ್ಲ ಎಂಬುವ ಮಾಹಿತಿಯೊಂದು ಲಭ್ಯವಾಗಿದೆ.

ಪಾತ್ರದಲ್ಲಿ ನಾಯಕ ನಾಯಕಿಯಾಗಿ ನಟಿಸಿದ ಅನು-ಆರ್ಯವರ್ಧನ್ ಜೋಡಿಗೆ ನೋಡುಗರು ಫಿದಾ ಆಗಿದ್ದಂತು ಸತ್ಯ.ಈ ಜೋಡಿಗಳ ನಟನೆಯಲ್ಲಿ ಕೆಮಿಸ್ಟ್ರಿ ಹೆಚ್ಚು ವರ್ಕ್ ಆಗಿತ್ತು ಎಂಬುವುದು ವೀಕ್ಷಕರ ಲೈಕ್ಸ್ ಇಂದ ಗೊತ್ತಾಗಿಬಿಡುತ್ತದೆ.

ಈ ನಡುವೆ ಅತೀ ಹೆಚ್ಚು ವೀಕ್ಷಕರಿಗೆ ನಿರಾಸೆಯ ಸುದ್ದಿಯೊಂದು ಬರಸಿಡಿಲಂತೆ ಬಡಿದಿರುವುದು ಬೇಸರದ ಸಂಗತಿ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರವಾಹಿಯಿಂದ ನಟಿ ಮೇಘಾ ಶೆಟ್ಟಿ ಹೊರಬಂದಿದ್ದಾರೆ ಎಂಬ ಸುದ್ದಿಯೊಂದು ಸದ್ಯಕ್ಕೆ ಕೇಳಿಬರುತ್ತಿದೆ.
ಈಗಾಗಲೇ ನಟಿ ಮೇಘ ತಮ್ಮ ಕೊನೆಯ ದಿನದ ಶೂಟಿಂಗ್ ಮುಗಿಸಿದ್ದು, ಮುಂದಿನ ದಿನಗಳಲ್ಲಿ ಧಾರವಾಹಿಯಲ್ಲಿ ಅನು ಸಿರಿಮನೆಯಾಗಿ ಕಾಣಿಸಿಕೊಳ್ಳಲ್ಲ ಎನ್ನಲಾಗಿದ್ದು,ಅನು ಪಾತ್ರಕ್ಕೆ ಮೇಘ ವಿದಾಯ ಹೇಳಿರುವುದು ಅಭಿಮಾನಿಗಳ ಎದೆಯಲ್ಲಿ ಬೇಸರದ ರಾಟೆಯೊಂದನ್ನು ತಿರುಗಿಸಿದಂತಾಗಿದೆ.

ಯಾವ ಕಾರಣಕ್ಕಾಗಿ ಮೇಘಾ ಶೆಟ್ಟಿ ಸೀರಿಯಲ್ನಿಂದ ಅರ್ಧಕ್ಕೆ ಹೊರಬಂದಿದ್ದಾರೆ ಎಂಬುವುದು ಇನ್ನೂ ನಿಗೂಢವಾಗುಳಿದಿದೆ.

ಈ ಬಗ್ಗೆ ಯಾವುದೇ ಸ್ಪಷ್ಟನೆ ಕೊಟ್ಟಿಲ್ಲವಾದರೂ, ಮೇಘ ನಟನೆಯ ಕೆಲ ಎಪಿಸೋಡ್ ಗಳು ಇನ್ನೂ ಕೆಲ ದಿನ ಮುಂದುವರಿಯುತ್ತದೆ ಎಂದು ತಿಳಿದು ಬಂದಿದೆ.

Leave A Reply

Your email address will not be published.