ನವವಿವಾಹಿತ ವಿನಯ ಬಾಳಿಲ ನೇಣು ಬಿಗಿದು ಆತ್ಮಹತ್ಯೆ | ನಿರುದ್ಯೋಗ ಸಮಸ್ಯೆಯಿಂದ ಆತ್ಮಹತ್ಯೆ ಶಂಕೆ
ಸುಳ್ಯ : ನಾಲ್ಕೂರು ಗ್ರಾಮದ ಹೊಸಹಳ್ಳಿ ಯ ವಿನಯ್ ಬಾಳಿಲ ಕುಕ್ಕುತ್ತಡಿ ಅವರು ಮನೆ ಹತ್ತಿರದ ಮರವೊಂದಕ್ಕೆ ಜು.6ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಿರುದ್ಯೋಗ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದೆ.
ವಿನಯ್ ಅವರು ಇತ್ತೀಚೆಗಷ್ಟೆ ವಿವಾಹವಾಗಿದ್ದು ಪತ್ನಿ, ತಂದೆ ಬಾಬು ಗೌಡ, ತಾಯಿ ಚಂದ್ರಾವತಿ, ಸಹೋದರ ಸುರೇಶ, ಸಹೋದರಿ ನವೀನ ಅವರನ್ನು ಅಗಲಿದ್ದಾರೆ.