ಬಲ್ಯ : ದಲಿತರ ಮನೆಗೆ ತೆರಳುವ ದಾರಿಯನ್ನು ಅತಿಕ್ರಮಣ | ಸೂಕ್ತ ಕ್ರಮಕ್ಕೆ ದಲಿತ ಸೇವಾ ಸಮಿತಿ ಒತ್ತಾಯ
ಕಡಬ ತಾಲೂಕು ಬಲ್ಯ ಗ್ರಾಮದ ಕಜೆ ಎಂಬಲ್ಲಿ ದಲಿತ ವ್ಯಕ್ತಿಯೊರ್ವರ ಮನೆಗೆ ತೆರಳುವ ದಾರಿಯನ್ನು ವ್ಯಕ್ತಿಗಳಿಬ್ಬರು ಅಕ್ರಮವಾಗಿ ಅತಿಕ್ರಮಿಸಿದ್ದಾರೆ ಎಂದು ದಲಿತ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು ಆರೋಪಿಸಿದ್ದಾರೆ.
ಕಡಬ ಪ್ರೆಸ್ ಕ್ಲಬ್ ನಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ದಲಿತ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಬಿ ಕೆ ಸೇಸಪ್ಪ ಬೆದ್ರಕಾಡು, ಬಲ್ಯ ಗ್ರಾಮದ ಕಜೆ ಎಂಬಲ್ಲಿ ಆನಂದ ಮುಗೇರ ಎಂಬುವವರ ಮನೆಗೆ ಹಾದು ಹೊಗುವ ದಾರಿಯನ್ನು ಗ್ರಾಮದ ಟಿ ಕುರಿಯಾನ್ ಹಾಗು ತೊಮಸ್ ಎಂಬುವವರು ಅತಿಕ್ರಮಿಸಿದ್ದಾರೆ. ಇದನ್ನು ತೆರವುಗೊಳಿಸಬೇಕು .ಮತ್ತು ದಾರಿ ಹಾದು ಹೋಗಿರುವ ಒಟ್ಟು ಸುಮಾರು 4 ಎಕ್ರೆ ಜಮೀನು ಅತಿಕ್ರಮ ವಾಗಿರುವ ಬಗ್ಗೆ ಸಂಶಯವಿದ್ದು, ಈ ಬಗ್ಗೆ ಕ್ರಮಕೈಗೊಳ್ಳುವಂತೆ ಗ್ರಾಮ ಕರಣಿಕರಿಗೆ ಮನವಿ ನೀಡಲಾಗಿದೆ. ಶೀಘ್ರದಲ್ಲಿ ಈ ಬಗ್ಗೆ ಕ್ರಮಕೈಗೊಳ್ಳದಿದ್ದಲ್ಲಿ ಉಗ್ರ ಹೊರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ದಲಿತ ಸೇವಾ ಸಮಿತಿ ಪುತ್ತೂರು ತಾಲೂಕು ಅಧ್ಯಕ್ಷ ಅಣ್ಣಪ್ಪ ಕಾರೆಕಾಡು, ಕಡಬ ತಾಲೂಕು ಆದ್ಯಕ್ಷ ಕೇಶವ ಕುಪ್ಲಾಜೆ, ಜಿಲ್ಲಾ ಪ್ರದಾನ ಕಾರ್ಯದರ್ಶಿ ಚಂದ್ರಶೇಖರ ಯು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುರೇಶ್ ತೊಟಂತಿಲ, ಪುತ್ತೂರು ತಾಲೂಕು ಪ್ರದಾನ ಕಾರ್ಯದರ್ಶಿ ಚಿದಾನಂದ, ರಸ್ತೆ ವಂಚಿತ ಆನಂದ ಮೊದಲಾದವರು ಇದ್ದರು