ದಕ್ಷಿಣ ಕನ್ನಡ | ಡೆಂಗ್ಯೂ ಜ್ವರಕ್ಕೆ ಮತ್ತೊಬ್ಬ ಯುವಕ ಬಲಿ

ಸುಳ್ಯ : ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಡೆಂಗ್ಯೂ ಜ್ವರಕ್ಕೆ ಯುವಕನೊಬ್ಬನ ಬಲಿಯಾಗಿದೆ.

ಸುಳ್ಯದ ದೇವಚಳ್ಳ ಗ್ರಾಮದ ಶಶಿಕುಮಾರ್ (27) ಡೆಂಗ್ಯೂ ಜ್ವರಕ್ಕೆ ಬಲಿಯಾದ ಘಟನೆ ಇಂದು ನಡೆದಿದೆ.

ಅವರಿಗೆ ವಾರದ ಡೆಂಗ್ಯೂ ಜ್ವರ ಕಾಣಿಸಿಕೊಂಡು ಮೊದಲು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆ ನಂತರ ಜ್ವರ ಉಲ್ಬಣಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಲಾಕ್ ಗೆ ತೆರಳಿದ್ದರು. ಅಲ್ಲಿ ಜ್ವರ ಮತ್ತಷ್ಟು ಉಲ್ಬಣಿಸಿ ನಿನ್ನೆ ನಿಧನರಾದರೆಂದು ತಿಳಿದುಬಂದಿದೆ.

ಮೃತ ಶಶಿಕುಮಾರ್ ಅವರು ಸುಬ್ರಹ್ಮಣ್ಯ ದಲ್ಲಿ ಟ್ಯಾಕ್ಸಿ ಚಾಲಕರಾಗಿ ದುಡಿಯುತ್ತಿದ್ದರು. ದೇವ ಕನ್ನಡಕಜೆ ಚಿನ್ನಪ್ಪ ಹಾಗೂ ಪ್ರೇಮರವರ ಏಕೈಕ ಪುತ್ರರಾಗಿದ್ದ ಎಳೆಯ ಪ್ರಾಯದ ಶಶಿಕುಮಾರ್ ಸಾವು ಕಂಡ ಕುಟುಂಬ ದಿಕ್ಕುತಪ್ಪಿದಂತಾಗಿದೆ.

ಸುಳ್ಯ ತಾಲೂಕಿನಲ್ಲಿ ಡೆಂಗ್ಯೂ ಪ್ರಕರಣಗಳು ಏರುತ್ತಿರುವುದು ಆತಂಕಕಾರಿಯಾಗಿದೆ. ಒಂದೇ ದಿನದ ಅಂತರದಲ್ಲಿ ಇದು ಎರಡನೇ ಡೆಂಗ್ಯೂ ಪ್ರಕರಣದ 2 ನೆಯ ಸಾವಿನ ಪ್ರಕರಣವಾಗಿದೆ.

Leave A Reply

Your email address will not be published.