ಕೆಯ್ಯೂರು : ಹಾವು ಕಚ್ಚಿ ಮಹಿಳೆ ಸಾವು | ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿರುವಾಗ ಘಟನೆ

ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮ ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿರುವಾಗ ಹಾವು ಕಚ್ಚಿದ ಪರಿಣಾಮ ಓರ್ವ ಮಹಿಳೆ ಮತಪಟ್ಟಿದ್ದಾರೆ. ಮೆ 11 ಸ್ವಗೃಹದಲ್ಲಿ ಅವರು ನಿಧನರಾದರು.

ಎಟ್ಯಡ್ಕ ನಿವಾಸಿ ವಿಜಯ(45) ಎಂಬವರೇ ಹೀಗೆ ಹಾವಿನ ಕಡಿತದಿಂತ ಮೃತಪಟ್ಟವರು.

ಮೃತರು ಬಾಬು ನಾಯ್ಕರ ಪತ್ನಿ ಮೆ 8 ರಂದು ತಮ್ಮ ಮನೆಯ ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿರುವಾಗ ವಿಷ ಪೂರಿತ ಹಾವು ಕಚ್ಚಲ್ಪಟ್ಟಿತ್ತು. ಇದನ್ನು ಕಂಡ ಮನೆಯವರು ಕೂಡಲೆ ಹಳ್ಳಿ ಮದ್ದು ಚಿಕಿತ್ಸೆ ಕೊಡಿಸಿ ಚೇತರಿಸಿ ಕೊಂಡಿದ್ದರು. ಗ್ರಾಮಸ್ಥರು ಆಸ್ಪತ್ರೆಗೆ ದಾಖಲಾಗಲು ಹೇಳಿದ್ದರೂ ಅದನ್ನು ನಿರ್ಲಕ್ಷಿಸಿದ್ದರು.

ಮೆ 11ರಂದು ಪರಿಸ್ಥಿತಿ ಉಲ್ಬಣಿಸಿದೆ. ಚಿಕಿತ್ಸೆ ಫಲಿಸದೆ ಅವರು ಇಂದು ಮುಂಜಾನೆ ಮೃತರಾದರು. ಮೃತರು ಗಂಡ ಬಾಬು ನಾಯ್ಕ, ಮಕ್ಕಳಾದ ಸಂಧ್ಯಾ, ಸತ್ಯ, ಸಂದೀಪ್ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Leave A Reply

Your email address will not be published.