ಆಲಂಕಾರು : ಮೊಬೈಲ್ ಟವರ್ ನಲ್ಲಿ ವಿದ್ಯುತ್ ಶಾಕ್ | ಟವರ್ ಮೈಂಟೇನರ್ ಮೃತ್ಯು

ವಿದ್ಯುತ್ ಅವಘಡದಿಂದಾಗಿ ಮೊಬೈಲ್ ಟವರ್ ಮೈಂಟೇನರ್ ಓರ್ವರು ಮೃತಪಟ್ಟ ಘಟನೆ ಭಾನುವಾರ ತಡರಾತ್ರಿ ಆಲಂಕಾರಿನಲ್ಲಿ ನಡೆದಿದೆ.

ಉಪ್ಪಿನಂಗಡಿ ಗ್ರಾಮದ ನಟ್ಟಿಬೈಲು ದಿವಂಗತ ವಾಸುದೇವ ನಾಯಕ್‌ರವರ ಪುತ್ರ ಯುನಿಟೆಕ್ ಎನರ್ಜಿ ಸೊಲ್ಯುಷನ್ಸ್ ನ ಟೆಕ್ನಿಷಿಯನ್ ರಾಧೇಶ್ಯಾಮ್ ನಾಯಕ್(40 ವ) ಮೃತಪಟ್ಟ ದುರ್ದೈವಿಯಾಗಿದ್ದಾರೆ.

ಅವರು ತನ್ನ ಪುತ್ರಿಯನ್ನು ಕಾರಿನಲ್ಲಿ ಕೂರಿಸಿಕೊಂಡು ಖಾಸಗಿ ಮೊಬೈಲ್ ಟವರ್‌ನ ನಿರ್ವಹಣೆಗೆ ಬಂದಿದ್ದರು. ಆಗ ಟವರ್ ಟೆಕ್ನಿಷಿಯನ್ ವಿದ್ಯುತ್ ಅಘಾತಕ್ಕೆ ಒಳಗಾಗಿ ಮೃತಪಟ್ಟ ಘಟನೆ ಮೇ.2ರಂದು ರಾತ್ರಿ ಆಲಂಕಾರು ಗ್ರಾಮದ ನೆಕ್ಕರೆ ಎಂಬಲ್ಲಿ ನಡೆದಿದೆ.

ಮೃತರು ಆಲಂಕಾರು‌ ಸಮೀಪದ ನೆಕ್ಕರೆ ಎಂಬಲ್ಲಿರುವ ಏರ್ ಟೆಲ್ ಕಂಪೆನಿಯ ಟವರ್ ಮೈಂಟೈನರ್ ಆಗಿದ್ದು, ರವಿವಾರದಂದು ರಾತ್ರಿ ವೇಳೆ ವಿದ್ಯುತ್ ಗುಡುಗು ಮಿಂಚಿನ ಪ್ರಯುಕ್ತ ವಿದ್ಯುತ್ ವ್ಯತ್ಯಯ ಉಂಟಾದ ಪರಿಣಾಮ ರಿಪೇರಿಗೆಂದು ಟವರ್ ಬಳಿ ಹೋಗಿದ್ದರು. ಆ ಸಂದರ್ಭ ಅವರಿಗೆ ವಿದ್ಯುತ್ ಶಾಕ್ ತಗುಲಿತ್ತು. ರಸ್ತೆಯಲ್ಲಿ ಕಾರು ನಿಲ್ಲಿಸಿ ತಮ್ಮ ಪುತ್ರಿಯನ್ನು ಅದರಲ್ಲಿ ಕುಳ್ಳಿರಿಸಿ ಹೋಗಿದ್ದರು. ಎಷ್ಟೋ ಹೊತ್ತಿನ ನಂತರ ಕೂಡ ತಂದೆ ಮರಳದೆ ಇದ್ದಾಗ ಶಾಕ್ ಸಂಗತಿ ಬೆಳಕಿಗೆ ಬಂದಿದೆ.

ಸ್ಥಳಕ್ಕೆ ಕಡಬ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave A Reply

Your email address will not be published.