ಬೆಳ್ತಂಗಡಿ | ಶಾಸಕ ಹರೀಶ್ ಪೂಂಜ ಅವರಿಂದ ನಂದಗೋಕುಲ ಗೋ‌ಶಾಲೆಯ ಉದ್ಘಾಟನೆ

ಬೆಳ್ತಂಗಡಿ: ಸ್ವಾಮಿ ವಿವೇಕಾನಂದ ಸೇವಾಶ್ರಮ‌ ಟ್ರಸ್ಟ್ ನೇತೃತ್ವದಲ್ಲಿ ತಾಲೂಕಿನ ಕಳೆಂಜ ಗ್ರಾಮದ ಬಂಡೇರಿಯಲ್ಲಿ ಹೊಸತಾಗಿ ನಿರ್ಮಾಣಗೊಂಡ ನಂದಗೋಕುಲ ಗೋ‌ಶಾಲೆಯನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ರವರು ಉದ್ಘಾಟಿಸಿದರು.

ನಂದಗೋಕುಲ ಗೋಶಾಲೆಯಲ್ಲಿ ಗೋವುಗಳ ರಕ್ಷಣೆ, ನಿರ್ಗತಿಕ, ಅನಾಥ ಹಾಗೂ ಅಶಕ್ತ ಗೋವುಗಳ ರಕ್ಷಣೆಗೆ ಪೂರಕವಾದ ವಾತಾವರಣ ನಿರ್ಮಾಣವಾಗಲಿದೆ ಎಂದು ಉದ್ಘಾಟನಾ ಸಮಾರಂಭದ ಬಳಿಕ ಮಾತನಾಡಿದ ಶಾಸಕರು ಹೇಳಿದರು.

ಈ‌ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಗೌಡ ಕೈಕುರೆ, ಶ್ರೀನಿವಾಸ್ ರಾವ್, ಟ್ರಸ್ಟ್​ನ ಅಧ್ಯಕ್ಷ, ಉಜಿರೆ ದಂತ ವೈದ್ಯ ಡಾ. ಎಂ.ಎಂ.ದಯಾಕರ್ ಮತ್ತಿತರರು ಉಪಸ್ಥಿತರಿದ್ದರು.

Leave A Reply

Your email address will not be published.