ಸರ್ವೆ : ಸಿಡಿಲು ಬಡಿದು ಮನೆಗೆ ಹಾನಿ, ಕರು ಸಾವು
![](https://hosakannada.com/wp-content/uploads/2024/07/First.jpeg)
ಸವಣೂರು: ಬುಧವಾರ ಸಂಜೆ ಸಿಡಿಲು ಬಡಿದು ಮನೆಗೆ ಹಾನಿಯಾಗಿ, ಕೊಟ್ಟಿಗೆಯಲ್ಲಿದ್ದ ಕರು ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ಕರುಂಬಾರು ಎಂಬಲ್ಲಿ ನಡೆದಿದೆ.
![](https://hosakannada.com/wp-content/uploads/2024/07/Middle.jpeg)
![](https://hosakannada.com/wp-content/uploads/2020/05/IMG-20200513-WA0120-800x450.jpg)
![](https://hosakannada.com/wp-content/uploads/2020/05/IMG-20200513-WA0118-1-800x450.jpg)
ವೀರಪ್ಪ ಗೌಡ ಕರುಂಬಾರು ಅವರ ಮನೆಗೆ ಬುಧವಾರ ಸಂಜೆ ಮಳೆಯೊಂದಿಗೆ ಸಿಡಿಲು ಬಡಿದಿದೆ.ಮನೆಯ ವಯರಿಂಗ್ ಸಂಪೂರ್ಣ ಸುಟ್ಟುಹೋಗಿದ್ದು,ವಿದ್ಯುತ್ ಉಪಕರಣಗಳಿಗೂ ಹಾನಿಯಾಗಿದೆ.
![](https://hosakannada.com/wp-content/uploads/2020/05/IMG-20200513-WA0115-800x450.jpg)
ಸ್ಥಳಕ್ಕೆ ಮುಂಡೂರು ಗ್ರಾ.ಪಂ.ಅಧ್ಯಕ್ಷ ಎಸ್.ಡಿ.ವಸಂತ,ಗ್ರಾಮಲೆಕ್ಕಾಧಿಕಾರಿ ತುಳಸಿ ಬೇಟಿ ನೀಡಿದರು.
ನರಿಮೊಗರು ಪಶುವೈದ್ಯ ಕೇಂದ್ರದ ಡಾ.ಪ್ರಸನ್ನ ಹೆಬ್ಬಾರ್ ಕರುವಿನ ಮರಣೋತ್ತರ ಪರೀಕ್ಷೆ ನಡೆಸಿದರು.