ಸರ್ವೆ : ಸಿಡಿಲು ಬಡಿದು ಮನೆಗೆ ಹಾನಿ, ಕರು ಸಾವು

ಸವಣೂರು: ಬುಧವಾರ ಸಂಜೆ ಸಿಡಿಲು ಬಡಿದು ಮನೆಗೆ ಹಾನಿಯಾಗಿ, ಕೊಟ್ಟಿಗೆಯಲ್ಲಿದ್ದ ಕರು ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ಕರುಂಬಾರು ಎಂಬಲ್ಲಿ ನಡೆದಿದೆ.

ವೀರಪ್ಪ ಗೌಡ ಕರುಂಬಾರು ಅವರ ಮನೆಗೆ ಬುಧವಾರ ಸಂಜೆ ಮಳೆಯೊಂದಿಗೆ ಸಿಡಿಲು ಬಡಿದಿದೆ.ಮನೆಯ ವಯರಿಂಗ್ ಸಂಪೂರ್ಣ ಸುಟ್ಟುಹೋಗಿದ್ದು,ವಿದ್ಯುತ್ ಉಪಕರಣಗಳಿಗೂ ಹಾನಿಯಾಗಿದೆ.

ಸ್ಥಳಕ್ಕೆ ಮುಂಡೂರು ಗ್ರಾ.ಪಂ.ಅಧ್ಯಕ್ಷ ಎಸ್.ಡಿ.ವಸಂತ,ಗ್ರಾಮ‌ಲೆಕ್ಕಾಧಿಕಾರಿ ತುಳಸಿ ಬೇಟಿ ನೀಡಿದರು.
ನರಿಮೊಗರು ಪಶುವೈದ್ಯ ಕೇಂದ್ರದ ಡಾ.ಪ್ರಸನ್ನ ಹೆಬ್ಬಾರ್ ಕರುವಿನ ಮರಣೋತ್ತರ ಪರೀಕ್ಷೆ ನಡೆಸಿದರು.

Leave A Reply

Your email address will not be published.