ಕುಕ್ಕೆ ಸುಬ್ಬಪ್ಪನ ಅನ್ನಪ್ರಸಾದ ತಿಪ್ಪೆಗೆ | ನಿರಾಶ್ರಿತ ಕಾರ್ಮಿಕರ ಕೆಲಸಕ್ಕೆ ವ್ಯಾಪಕ ಆಕ್ರೋಶ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲದ ವತಿಯಿಂದ ನಡೆಸಲ್ಪಡುತ್ತಿರುವ ನಿರಾಶ್ರಿತರ ಕೇಂದ್ರದಲ್ಲಿ ಅನ್ನ ಚೆಲ್ಲುತ್ತಿರುವ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಚರ್ಚೆಗೆ ಕಾರಣವಾಗಿದೆ.
![](https://hosakannada.com/wp-content/uploads/2024/07/First.jpeg)
![](https://hosakannada.com/wp-content/uploads/2020/05/IMG-20200512-WA0012-500x500.jpg)
ಸುಬ್ರಹ್ಮಣ್ಯದಲ್ಲಿ ಅಭಯ ವಸತಿಗೃಹದಲ್ಲಿ ರುವವರಿಗೆ ಸೋಮವಾರದಂದು ತಯಾರಿಸಿದ ಅನ್ನ ವನ್ನು ದೊಡ್ಡ ಕಟಾರವೊಂದರಲ್ಲಿ ತುಂಬಿಸಿ ಟ್ರಾಕ್ಟರ್ ಗೆ ಸುರಿದು ಚೆಲ್ಲುತ್ತಿರುವುದಾಗಿದೆ.
![](https://hosakannada.com/wp-content/uploads/2024/07/Middle.jpeg)
ಆಹಾರದ ಅಗತ್ಯ ಇರುವ ಈ ತುರ್ತು ಸಂದರ್ಭದಲ್ಲಿ ಸಾರ್ವಜನಿಕವಾಗಿ ಅನ್ನ ಬಿಸಾಡುತ್ತಿರುವು್ದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಗುಲದ ಮಾಹಿತಿಯಂತೆ ಕಾರ್ಮಿಕರೆಲ್ಲರೂ ಬಿಹಾರದವರಾಗಿದ್ದ ಕಾರಣ ಬೆಳ್ತಿಗೆ ಊಟ ಮಾಡುತ್ತಿಲ್ಲ.ಇದರಿಂದಾಗಿ ಅನ್ನ ಉಳಿದಿದ್ದು ಅದನ್ನು ಬಿಸಾಡಿದ್ದಾರೆ. ಈ ಬಗ್ಗೆ ದೇವಸ್ಥಾನದವರ ಗಮನಕ್ಕೆ ಬಂದಿಲ್ಲ. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಜಾಗ್ರತೆ ವಹಿಸುವುದಾಗಿಯೂ ಕಾರ್ಮಿಕರಿಗೆ ಇನ್ಮುಂದೆ, ಚಪಾತಿ ವ್ಯವಸ್ಥೆ ಮಾಡಲು ಸಿದ್ದತೆ ಮಾಡಲಾಗಿದೆ.