ಜಾರ್ಖಂಡ್ ಮೂಲದ ವಲಸೆ ಕಾರ್ಮಿಕರಿಗೆ ವ್ಯವಸ್ಥೆ ಕಲ್ಪಿಸಿದ ಕಡಬ ಕಂದಾಯ ಇಲಾಖೆ

 ಕಡಬ: ಸುಬ್ರಹ್ಮಣ್ಯದಲ್ಲಿ ತಂಗಿದ್ದ ಜಾರ್ಖಂಡ್ ಮೂಲದ ವಲಸೆ ಕಾರ್ಮಿಕರ ಪೈಕಿ ಸುಮಾರು‌ ಹತ್ತು ಜನರ ತಂಡವೊಂದು ನಡೆದುಕೊಂಡು ತೆರಳುತ್ತಿರುವ ಮಾಹಿತಿ ಅರಿತ ಕಡಬದ ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆಯವರು ತಕ್ಷಣವೇ ಊಟದ ವ್ಯವಸ್ಥೆ ಕಲ್ಪಿಸಿ ಮರಳಿ ಸುಬ್ರಹ್ಮಣ್ಯಕ್ಕೆ ಕರೆದೊಯ್ದು ಬಿಟ್ಟ ಘಟನೆ  ನಡೆದಿದೆ.


ಮಂಗಳೂರಿನಿಂದ‌ ಜಾರ್ಖಂಡ್ ಗೆ ರೈಲು ತೆರಳಲಿದೆ‌ ಎಂಬ ತಪ್ಲು ಮಾಹಿತಿಯಿಂದಾಗಿ ಸುಬ್ರಹ್ಮಣ್ಯದಲ್ಲಿ ತಂಗಿದ್ದ‌ ಹತ್ತರಷ್ಟು ವಲಸೆ ಕಾರ್ಮಿಕರು ನಡೆದುಕೊಂಡೇ ಮಂಗಳೂರಿಗೆಂದು ತೆರಳುತ್ತಿದ್ದರು.

ಈ ವೇಳೆ ಮಾಹಿತಿ ಅರಿತ ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದು, ಮರ್ಧಾಳ ಸಮೀಪದ ಕಲ್ಲಾಜೆ ಎಂಬಲ್ಲಿ ಅವರನ್ನು ತಡೆದು, ಊಟದ ವ್ಯವಸ್ಥೆ ಕಲ್ಪಿಸಿದ್ದಲ್ಲದೆ ಅವರ ಮನವೊಳಿಸಿ ಮರಳಿ ಸುಬ್ರಹ್ಮಣ್ಯಕ್ಕೆ ಕಳುಹಿಸಿದರು.  ಗ್ರಾಮಕರಣಿಕರಾದ ರಂಜನ್, ಶ್ರೀರಾಜ್, ಹರೀಶ್ ಹಾಗೂ ತಹಶಿಲ್ದಾರ್ ಕಛೇರಿಯ ಉದಯ ಕುಮಾರ್ ಸಹಕರಿಸಿದರು. 

Leave A Reply

Your email address will not be published.