ಆಲಂಕಾರು | ಬೈಕ್‌ಗೆ ಕಾರು ಡಿಕ್ಕಿ | ಸವಾರಗೆ ಗಾಯ

ಕಡಬ : ಬೈಕ್ ಹಾಗು ಕಾರು ನಡುವೆ ಅಪಘಾತ ನಡೆದು ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಪುತ್ತೂರು – ಶಾಂತಿಮೊಗರು ರಸ್ತೆಯ ಆಲಂಕಾರು ಗ್ರಾಮದ ಶರವೂರು ಎಂಬಲ್ಲಿ ಗುರುವಾರ ನಡೆದಿದೆ. 

ಆಲಂಕಾರು ಗ್ರಾಮದ ಕೊಂಡಾಡಿ ಕಮ್ತಿಲ ನಿವಾಸಿ ದಯಾನಂದ ಎಂಬುವವರು ಗಾಯಗೊಂಡವರು. ಬೆಳಿಗ್ಗೆ  ಮನೆಯಿಂದ ಆಲಂಕಾರಿನ ಡೈರಿಗೆ ಹಾಲು ಹಾಕಲೆಂದು ಬರುತ್ತಿದ್ದಾಗ ವಿರುದ್ದ ದಿಕ್ಕಿನಿಂದ ಪುತ್ತೂರು ಕಡೆ ತೆರಳುತ್ತಿದ್ದ ಕಾರು ನಡುವೆ ಡಿಕ್ಕಿ ಸಂಭವಿಸಿದೆ.

ಘಟನೆಯಿಂದ ದಯಾನಂದ ಅವರಿಗೆ ಕಾಲಿಗೆ ಗಂಭೀರ ಗಾಯವಾಗಿದ್ದು ಚಿಕಿತ್ಸೆಗಾಗಿ ಪುತ್ತೂರಿನ ಖಾಸಗಿ ಅಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನಿಂದ ಮಂಗಳೂರಿಗೆ ಕರೆದೊಯ್ಯಲಾಗಿದೆ.

ಸ್ಥಳಕ್ಕೆ  ಕಡಬ ಪೊಲೀಸರು ಅಗಮಿಸಿ ಪರಿಶೀಲನೆ ನಡೆಸಿದ್ದಾರೆ. 

Leave A Reply

Your email address will not be published.