ತನ್ನ ವಾರ್ಡ್‌ನ ಬಡಜನರಿಗೆ ಅಕ್ಕಿ ವಿತರಿಸಿದ ನರಿಮೊಗರು ಗ್ರಾ.ಪಂ.ಸದಸ್ಯ

ಪುತ್ತೂರು: ಕೊರೊನಾ ವೈರಸ್ ಭೀತಿಯಿಂದ ದೇಶದೆಲ್ಲೆಡೆ ಲಾಕ್‌ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಎಲ್ಲೆಡೆ ಕೂಲಿನಾಲಿ ಮಾಡಿ ಜೀವನ ಸಾಗಿಸುತ್ತಿರುವ ಬಡ ವರ್ಗದ ಜನತೆಗೆ ಉಣ್ಣಲು ಅನ್ನವಿಲ್ಲದೆ ಸಂಕಷ್ಟ ಪರಿಸ್ಥಿತಿ ಬಂದೊದಗಿದೆ.

ಈ ನಿಟ್ಟಿನಲ್ಲಿ ನರಿಮೊಗರು ಗ್ರಾ.ಪಂ.ಸದಸ್ಯ ನವೀನ್ ರೈ ಶಿಬರ ಅವರ ನೇತೃತ್ವದಲ್ಲಿ ನರಿಮೊಗರು ಎರಡನೇ ವಾರ್ಡ್ ನಲ್ಲಿರುವ 30 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 30 ಮನೆಯವರಿಗೆ ಉಚಿತವಾಗಿ ಅಕ್ಕಿ ವಿತರಿಸಿದರು.

ಈ ಸಂದರ್ಭದಲ್ಲಿ ನರಿಮೊಗರು ಯುವಕ ಮಂಡಲದ ಅಧ್ಯಕ್ಷ ಸುಧಾಕರ ಕುಲಾಲ್ ನಡುವಾಲ್,ಬಿಜೆಪಿ ಕಾರ್ಯಕರ್ತರಾದ ಸೀತಾರಾಮ ಆಚಾರ್,ರಾಜಶೇಖರ್ ಉಪಸ್ಥಿತರಿದ್ದರು.

Leave A Reply

Your email address will not be published.