Breaking News | ದಕ್ಷಿಣ ಕನ್ನಡಕ್ಕೆ ವಕ್ಕರಿಸಿದೆ ಮಹಾ ಮಾರಿ | ಓರ್ವನಿಗೆ ಕೊರೊನಾ ಪಾಸಿಟಿವ್ ದೃಢ

ದಕ್ಷಿಣ ಕನ್ನಡದಿಂದ ಮೊದಲ ಕೊರೋನಾ ಪತ್ತೆಯಾಗಿದೆ. ಎಲ್ಲೋ ದೂರದಲ್ಲಿ ಕಾಡುತ್ತಿದ್ದ ಮಹಾಮಾರಿ ನಮ್ಮ ಮಗ್ಗುಲಿಗೆ ಬಂದು ಬಿದ್ದಿದೆ.

ಸೋಂಕಿತ ವ್ಯಕ್ತಿ ದುಬಾಯಿಯಲ್ಲಿದ್ದ. ದುಬಾಯಿಯಿಂದ ಈ ವ್ಯಕ್ತಿ ಮಾರ್ಚ್ 19 ರಂದು ಮಂಗಳೂರಿಗೆ ವಿಮಾನದಲ್ಲಿ ಬಂದಿದ್ದ. 22 ವರ್ಷ ಆತ ಭಟ್ಕಳ ಮೂಲದವನು. ಸೋಂಕಿತ ವ್ಯಕ್ತಿಯನ್ನು ಆ ದಿನವೇ ಆಸ್ಪತ್ರೆಯಲ್ಲಿ ಇಡಲಾಗಿತ್ತು. ಆದುದರಿಂದ ಇನ್ನಷ್ಟು ಜನರಿಗೆ ಸೋಂಕು ತಗಲುವುದನ್ನು ತಪ್ಪಿಸಿದ್ದಾರೆ.

ಆತ ಮಂಗಳೂರಿನಿಂದ ಬಂದ ಕೂಡಲೇ ಆತನ ಗಂಟಲಿನ ದ್ರವವನ್ನು ಪರೀಕ್ಷೆಗೆ ಕಳಿಸಲಾಗಿತ್ತು. ಇವತ್ತು ಅದರ ರಿಪೋರ್ಟ್ ಬಂದಿದ್ದು ಅದು ‘ ಪಾಸಿಟಿವ್ ‘ ಎಂದಿದೆ. ಈ ವಿಷಯವನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಅವರು ಈಗ ತಾನೇ ಪ್ರಕಟಿಸಿದರು.

ಆತನ ಜತೆ 165 ಜನ ಜತೆಯಾಗಿ ಪ್ರಯಾಣಿಸಿದ್ದರು. ಈಗ ಅವರ ಸೇಫ್ಟಿಯ ಬಗ್ಗೆಯೂ ಗಮನ ಹರಿಸಬೇಕಾಗಿದೆ. ಅವರೆಲ್ಲ ಈಗ ಎಲ್ಲೆಲ್ಲಿದ್ದಾರೋ ? ದೇವರೇ ಬಲ್ಲ. ಜಿಲ್ಲಾಡಳಿತ ಅವರೆಲ್ಲರ ಮಾಹಿತಿ ಕೈಲಿಟ್ಟುಕೊಂಡಿದ್ದರೂ, ಈಗ ಅವರೆಲ್ಲರನ್ನೂ ತಪಾಸಣೆಗೆ ಒಳಪಡಿಸುವ ಅಗತ್ಯ ಇದೆ.

Leave A Reply

Your email address will not be published.