ಸರ್ವೆ | ಬಜರಂಗದಳ ಕಾರ್ಯಕರ್ತಗೆ ಮುಸುಕುಧಾರಿಗಳಿಂದ ಹಲ್ಲೆ ಪ್ರಕರಣ | ಇಬ್ಬರ ಬಂಧನ

Share the Article

ಪುತ್ತೂರು : ಸರ್ವೆಯಲ್ಲಿ ಮಾ.4ರ ರಾತ್ರಿ ಬೈಕ್‌ನಲ್ಲಿ ಬಂದ ಮುಸುಕುಧಾರಿಗಳು ಬಜರಂಗದಳ ಕಾರ್ಯಕರ್ತನಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಡಿವೈಎಸ್ಪಿ ಸ್ಕ್ವಾಡ್ ಮತ್ತು ಸಂಪ್ಯ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳಾದ ಶಮೀರ್ ಮತ್ತು ಆಬೀದ್ ಎಂಬವರನ್ನು ಬಂಧಿಸಲಾಗಿದೆ.

ಭಜರಂಗದಳದ ಪುತ್ತೂರು ನಗರ ಸಾಪ್ತಾಹಿಕ ಪ್ರಮುಖ್ , ಶಾಂತಿಗೋಡು ಗ್ರಾಮದ ಗೋಳಿತ್ತಡಿ ನಿವಾಸಿ ವೆಂಕಪ್ಪ ಗೌಡ ಎಂಬವರ ಪುತ್ರ ರಂಜಿತ್ ಜಿ.ವಿ ಮಾ.4ರಂದು ತನ್ನ ಅಜ್ಜಿ ಮನೆ ಸವಣೂರಿನ ಕೆಡೆಂಜಿ ಕಡೆ ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಹಿಂಬದಿಯಿಂದ ಎರಡು ಬೈಕ್‌ನಲ್ಲಿ ಬಂದ ನಾಲ್ವರು ಮುಸುಕುಧಾರಿಗಳು ಬೈಕ್‌ನ್ನು ತಡೆದು ನಿಲ್ಲಿಸಿ ಹಲ್ಲೆ ನಡೆಸಿ ಪರಾರಿಯಾಗಿದ್ದರು.

ಬಂಧಿತಾದ ಸವಣೂರಿನ ಶಮೀರ್-ಮುಕ್ವೆಯ ಅಬೀದ್

ಹಲ್ಲೆಗೈದ ಮುಸುಕುಧಾರಿಗಳ ಪೈಕಿ ಓರ್ವ ಆರೋಪಿಯನ್ನು ರಂಜಿತ್‌ ಗುರುತಿಸಿದ್ದರು, ಅವರಿಂದ ಮಾಹಿತಿ ಪಡೆದ ಪೊಲೀಸರು ಆರೋಪಿಗಳ ಪತ್ತೆ ಕಾರ್ಯ ನಡೆಸಿ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

ವಿಚಾರಣೆಯ ಬಳಿಕ ಹಲ್ಲೆ ಗೆ ನಿಖರ ಕಾರಣ ಏನೆಂದು ತಿಳಿಯಲಿದೆ.

ನಮ್ಮ ಫೇಸ್ ಬುಕ್ ಪೇಜ್ ಗೆ ನಿಮಗಿದೋ ಆಹ್ವಾನ. ಇಲ್ಲಿ ಕ್ಲಿಕ್ ಮಾಡಿ

Leave A Reply

Your email address will not be published.