ಕಾರಿಂಜ ಕ್ಷೇತ್ರದಲ್ಲಿ ಕಳವಳ : ಕೆರೆಯಲ್ಲಿ ಮುಳುಗಿ ಸಿದ್ದಕಟ್ಟೆಯ ಯುವಕ ಮೃತ್ಯು

Share the Article
ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ ದಳ

ಬಂಟ್ವಾಳ : ಗೆಳೆಯರೊಂದಿಗೆ ಕಾರಿಂಜದ ದೇವಸ್ಥಾನ ಕ್ಕೆ ಹೋಗಿದ್ದ ಯುವಕನೋರ್ವ ಕೆರೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಫೆ.9ರಂದು ನಡೆದಿದೆ. ಸಿದ್ದಕಟ್ಟೆಯ ವಕ್ಕಾಡಗೋಳಿ ನಿವಾಸಿ ಸೇಸಪ್ಪ ಎಂಬವರ ಪುತ್ರ ಸುಕೇಶ್ ಮೃತ ದುರ್ದೈವಿ.

ಆದಿತ್ಯವಾರ ರಜಾದಿನವಾದರಿಂದ ತನ್ನ ಇಬ್ಬರು ಸ್ನೇಹಿತರೊಂದಿಗೆ ಕಾರಿಂಜದ ದೇವಾಲಯ ಕ್ಕೆ ಬಂದಿದ್ದರು. ಕಾಲು ತೊಳೆಯಲೆಂದು ಕೆರೆಯ ನೀರಿಗೆ ಇಳಿದಾಗ ಮುಳುಗಿದ್ದಾನೆ‌ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ದಳದವರು ಆಗಮಿಸಿ ಮೃತದೇಹವನ್ನು ಕೆರೆಯಿಂದ ಮೇಲೆತ್ತಿದ್ದಾರೆ. ಪುಂಜಾಲಕಟ್ಟೆಯ ಪೋಲಿಸರು ಪ್ರಕರಣವನ್ನು ದಾಖಲಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆ ಗಾಗಿ ಬಂಟ್ವಾಳದ ತಾಲೂಕು ಸಮುದಾಯ ಆರೋಗ್ಯ ಕೇಂದ್ರಕ್ಕೆ ತರಲಾಗಿದೆ.

Leave A Reply

Your email address will not be published.