ಸವಣೂರು ಗ್ರಾ.ಪಂನ ಘನ ತ್ಯಾಜ್ಯ ಘಟಕಕ್ಕೆ ಜಿ.ಪಂ.ಸಿಇಓ ಭೇಟಿ, ಶ್ಲಾಘನೆ

ಸವಣೂರು : ಪಾಲ್ತಾಡಿ ಗ್ರಾಮದ ನಾಡೋಳಿಯಲ್ಲಿರುವ ಸವಣೂರು ಗ್ರಾ.ಪಂ.ನ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಗುರುವಾರ ಸಂಜೆ ದ.ಕ.ಜಿ.ಪಂ.ಸಿಇಓ ಡಾ.ಆರ್ ಸೆಲ್ವಮಣಿ ಬೇಟಿ ನೀಡಿ ಘಟಕದ ಕಾರ್ಯವನ್ನು ವೀಕ್ಷಿಸಿದರು.

ಈ ಸಂದರ್ಭ ಮಾತನಾಡಿದ ಡಾ.ಸೆಲ್ವಮಣಿ ಅವರು, ತ್ಯಾಜ್ಯ ವಿಲೇವಾರಿ ಘಟಕದ ವ್ಯವಸ್ಥೆ ಅಚ್ಚುಕಟ್ಟಾಗಿದ್ದು, ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ಮಾಡಬೇಕು.ತ್ಯಾಜ್ಯ ವಿಲೇವಾರಿ ತಗಲುವ ವೆಚ್ಚವನ್ನು ತ್ಯಾಜ್ಯಸಂಗ್ರಹಿಸಿ ನೀಡುತ್ತಿರುವವರಿಂದಲೇ ಪಡೆಯಬೇಕು. ಶುಲ್ಕ ಹೆಚ್ಚಳಕ್ಕೆ ಅವಕಾಶವಿದೆ. ಈ ಕುರಿತು ಆಡಳಿತ ಮಂಡಳಿ ಸಭೆಯಲ್ಲಿ ಕ್ರಮಕೈಗೊಳ್ಳಬಹುದು. ಘಟಕಕ್ಕೆ ಆವಶ್ಯಕವಾಗಿರುವ ಮೂಲಭೂತ ವ್ಯವಸ್ಥೆಗಾಗಿ 2 ಲಕ್ಷ ಅನುದಾನ ಮಂಜೂರು ಮಾಡಲಾಗುವುದು ಎಂದರು.

ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ ಅವರು, ಘಟಕಕ್ಕೆ ಆವಶ್ಯವಿರುವ ವಿದ್ಯುತ್ ಸಂಪರ್ಕ,ಕೊಳವೆ ಬಾವಿ ಕೊರೆಯಲು ಗ್ರಾ.ಪಂ.ನಿಂದ ಅನುದಾನ ಮೀಸಲಿಡಲಾಗಿದೆ ಎಂದರು.

ಪಿಡಿಓ ನಾರಾಯಣ ಬಟ್ಟೋಡಿ ಅವರು ಘಟಕದ ಕಾರ್ಯ ನಿರ್ವಹಣೆಯ ಕುರಿತು ಸಿಇಓ ಅವರಿಗೆ ವಿವರಿಸಿದರು.

ಈ ಸಂದರ್ಭ ತಾ.ಪಂ.ಮುಖ್ಯಕಾರ್ಯನಿರ್ವಹಣಾ ಅಧಿಕಾರಿ ನವೀನ್ ಭಂಡಾರಿ, ಸವಣೂರು ಗ್ರಾ.ಪಂ.ಸದಸ್ಯ ಸತೀಶ್ ಅಂಗಡಿಮೂಲೆ, ಗ್ರಾ.ಪಂ.ಲೆಕ್ಕಸಹಾಯಕ ಎ.ಮನ್ಮಥ,ಸಿಬಂದಿ ಪ್ರಮೋದ್ ಕುಮಾರ್ ರೈ, ಪಾಲ್ತಾಡಿ ಗ್ರಾಮ ವಿಕಾಸ ಸಮಿತಿ ಅಧ್ಯಕ್ಷ ಪ್ರವೀಣ್ ಚೆನ್ನಾವರ, ಸ್ವಚ್ಚತಾ ನಿರ್ವಾಹಕ ಬಾಬು ಉಪಸ್ಥಿತರಿದ್ದರು.

Leave A Reply

Your email address will not be published.