ಜಿಗರ್ ಟಗರ್ ಸಿದ್ದರಾಮಯ್ಯ ಈಗ ‘ಹೌದ್ ಹುಲಿಯಾ’
ಮೊನ್ನೆಯಷ್ಟೇ ಸಿದ್ದರಾಮಯ್ಯ ತಮ್ಮ ಎಂದಿನ ಟಗರು ಸ್ಟೈಲ್ನಲ್ಲಿ ಮತ್ತು ಅದಕ್ಕೊಪ್ಪುವ ವಾಯ್ಸಿನಲ್ಲಿ ಕಾಗೆವಾಡದ ಉಪಚುನಾವಣೆಯ ಸಂದರ್ಭದಲ್ಲಿ ಭಾಷಣ ಮಾಡುತ್ತಿದ್ದರು. ಮಾತು ಮುಂದುವರಿಸುತ್ತಾ, ‘ ದೇಶಕ್ಕೆ ಇಂದಿರಾ ಗಾಂಧೀ ಏನು ಮಾಡಿದರು? , ಇಡೀ ದೇಶಕ್ಕಾಗಿ ಪ್ರಾಣ ಕೊಡಲಿಲ್ಲವೇ” ಅಂತ ಕೇಳಿದರು. ಅಲ್ಲೇ ಮುಂದಿನ ಸಾಲಿನಲ್ಲಿ ಕುಳಿತಿದ್ದ, ಜೋಳದ ರೊಟ್ಟಿ ಆಗ ತಾನೆ ತಟ್ಟಿ ತಿಂದು ಬಂದವನೊಬ್ಬಥೇಟು ಜವಾರಿ ಸ್ಟೈಲ್ ನಲ್ಲಿ ಸರಕ್ಕನೆ ” ಹೌದು ಹುಲಿಯಾ “ ಅಂತ ಅಂದುಬಿಟ್ಟಿದ್ದಾನೆ. ಇಡೀ ಸಭೆ ಗೊಳ್ಳೆಂದು ದೊಡ್ಡದಾಗಿ ಬಾಯಗಲಿಸಿ …