Home latest ಕಡಬ: ಮಗಳ ಕ್ರೀಡಾಕೂಟ ಕಂಡು ಖುಷಿಯಿಂದ ಮನೆಯತ್ತ ಹೆಜ್ಜೆ ಹಾಕುವ ವೇಳೆ ನಡೆದ ದುರ್ಘಟನೆ!! ರೈಲು...

ಕಡಬ: ಮಗಳ ಕ್ರೀಡಾಕೂಟ ಕಂಡು ಖುಷಿಯಿಂದ ಮನೆಯತ್ತ ಹೆಜ್ಜೆ ಹಾಕುವ ವೇಳೆ ನಡೆದ ದುರ್ಘಟನೆ!! ರೈಲು ಡಿಕ್ಕಿಯಾಗಿ ಗಂಭೀರ ಗಾಯ-ಸಹಾಯದ ನಿರೀಕ್ಷೆಯಲ್ಲಿ ಬಡ ಕುಟುಂಬ!!

Hindu neighbor gifts plot of land

Hindu neighbour gifts land to Muslim journalist

ಕಡಬ: ಇಲ್ಲಿನ ಸುಬ್ರಹ್ಮಣ್ಯ ರೋಡ್ ನೆಟ್ಟಣ ರೈಲು ನಿಲ್ದಾಣದ ಬಳಿ ಹಳಿ ದಾಟುತ್ತಿದ್ದ ವೇಳೆ ವ್ಯಕ್ತಿಯೊಬ್ಬರಿಗೆ ರೈಲಿನ ಎಂಜಿನ್ ಡಿಕ್ಕಿಯಾಗಿ ಗಂಭೀರ ಗಾಯಗೊಂಡು ಮಂಗಳೂರಿನ ಹೆಸರಾಂತ ಖಾಸಗಿ ಎ.ಜೆ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.

ಗಾಯಳುವನ್ನು ಐತ್ತೂರು ಓಟೆಕಜೆ ನಿವಾಸಿ ನಾಗಣ್ಣ ಎಂದು ಗುರುತಿಸಲಾಗಿದ್ದು, ಮಂಗಳೂರಿನಲ್ಲಿ ನಡೆದಿದ್ದ ತನ್ನ ಮಗಳ ಕ್ರೀಡಾಕೂಟವನ್ನು ವೀಕ್ಷಿಸಿ, ಮಗಳ ಆಟವನ್ನು ಕಣ್ತುಂಬಿಕೊಂಡು ನೆಟ್ಟಣದಲ್ಲಿ ಬಂದಿಳಿದಿದ್ದರು. ಇನ್ನೇನು ಮನೆಗೆ ತೆರಳಬೇಕು ಎಂದು ಅಡ್ಡ ದಾರಿಯ ಮೂಲಕ ಮನೆಯತ್ತ ಹೆಜ್ಜೆ ಹಾಕಿದ್ದರು. ಹೀಗೆ ರೈಲು ಹಳಿ ದಾಟುತ್ತಿದ್ದ ವೇಳೆ ಏಕಾಏಕಿ ಬಂದ ರೈಲು ಎಂಜಿನ್ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದು, ಸಾವಿನ ದವಡೆಯಿಂದ ಅದೃಷ್ಟವಶಾತ್ ಪಾರಾಗಿದ್ದರು.

ಸದ್ಯ ಗಂಭೀರ ಗಾಯಗಳ ಹಿನ್ನೆಲೆಯಲ್ಲಿ ಮಂಗಳೂರಿನ ಪ್ರಸಿದ್ಧ ಎ.ಜೆ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಮುಂದುವರಿಸಿದ್ದು, ಈಗಾಗಲೇ ಸುಮಾರು ಮೊತ್ತ ತಗುಲಿದೆ. ತೀರಾ ಬಡ ಕುಟುಂಬ ಇವರದ್ದಾಗಿದ್ದು, ನಾಲ್ವರು ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸಿಕೊಂಡು, ದುಡಿದು ಬದುಕುತ್ತಿದ್ದ ಕುಟುಂಬಕ್ಕೆ ಬರ ಸಿಡಿಲು ಬಡಿದಂತಾಗಿದೆ. ಮುಂದಿನ ಚಿಕಿತ್ಸೆಗಾಗಿ ಹೆಚ್ಚಿನ ಮೊತ್ತ ತಗುಲಲಿದ್ದು ಸುಮಾರು 8-10 ಲಕ್ಷ ಹಣ ಹೊಂದಿಸಲು ಕುಟುಂಬ ಸಮಾಜದ ಮುಂದೆ ಕೈಚಾಚಿದೆ.

ನಾಡಿನ ಸಹೃದಯಿ ಬಂಧುಗಳು, ದಾನಿಗಳು ಕಿಂಚಿತ್ತು ಸಹಾಯ ಮಾಡುವರು ಎನ್ನುವ ನಿರೀಕ್ಷೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದ್ದು, ದಾನಿಗಳ ನಿರೀಕ್ಷೆಯಲ್ಲಿದೆ ಬಡ ಕುಟುಂಬ.