Home Latest Health Updates Kannada Morning Tips: ಬೆಳಗ್ಗೆ ಎದ್ದ ತಕ್ಷಣ ಅಪ್ಪಿತಪ್ಪಿಯೂ ಇದನ್ನು ನೋಡಬೇಡಿ.!

Morning Tips: ಬೆಳಗ್ಗೆ ಎದ್ದ ತಕ್ಷಣ ಅಪ್ಪಿತಪ್ಪಿಯೂ ಇದನ್ನು ನೋಡಬೇಡಿ.!

Hindu neighbor gifts plot of land

Hindu neighbour gifts land to Muslim journalist

ಮುಂಜಾನೆ ಬೇಗ ಏಳುವುದರಿಂದ ಅದೃಷ್ಟ ಒಲಿಯುತ್ತದೆ ಎಂಬ ಮಾತು ಸಾಮಾನ್ಯವಾಗಿ ಕೇಳಿರುತ್ತೇವೆ. ಆದರೆ, ಎಷ್ಟೋ ಬಾರಿ ಬೇಗ ಎದ್ದರೂ ಇಂದು ದಿನ ಚೆನ್ನಾಗಿರಲಿಲ್ಲ ಅಥವಾ ಕಷ್ಟಪಟ್ಟು ಕೆಲಸ ಮಾಡಿದರೂ ಫಲ ಸಿಗಲಿಲ್ಲ ಎಂಬ ಮಾತುಗಳು ಕೇಳಸಿಗುತ್ತವೆ. ವಾಸ್ತು ಶಾಸ್ತ್ರದ ಪ್ರಕಾರ, ಇಂತಹ ಸಂದರ್ಭಗಳು ನಮಗೆ ಸಂಭವಿಸುವುದರ ಹಿಂದೆ ನಮ್ಮ ತಪ್ಪುಗಳೂ ಇವೆ. ಬೆಳಗ್ಗೆ ಎದ್ದ ತಕ್ಷಣ ಮಾಡುವ ಕೆಲ ಕೆಲಸಗಳು ನಮ್ಮನ್ನು ಇಂತಹ ಪರಿಸ್ಥಿತಿಗೆ ದೂಡಿರುತ್ತವೆ. ಈ ಕಾರಣದಿಂದಾಗಿ ನಿಮ್ಮ ಅದೃಷ್ಟವು ದುರದೃಷ್ಟಕರವಾಗಿ ಬದಲಾಗುವುದು. ಹಾಗಾದರೆ, ಬೆಳಗ್ಗೆ ಎದ್ದ ತಕ್ಷಣ ಯಾವ ಕೆಲಸ ಮಾಡಬಾರದು ಎಂಬುದನ್ನು ತಿಳಿಯೋಣ. ನಮ್ಮ ಇಡೀ ದಿನ ಚೆನ್ನಾಗಿ ಇರಬೇಕು ಎಂದರೆ ನಾವು ಎದ್ದ ತಕ್ಷಣ ಮನಸಿಗೆ ಹಿತ ಎನ್ನಿಸುವಂತೆ ಇರಬೇಕು. ಇದೇ ಕಾರಣಕ್ಕೆ ಬೆಳಗ್ಗೆ ಕಣ್ಣು ಬಿಟ್ಟ ಕೂಡಲೇ ಕನ್ನಡಿಯನ್ನು ನೋಡದೇ ಒಳ್ಳೆಯ ವಸ್ತುಗಳನ್ನು ನೋಡಬೇಕು ಎಂದು ವಾಸ್ತುಶಾಸ್ತ್ರದಲ್ಲಿ ತಿಳಿಸಲಾಗಿದೆ.

ಮುಖ್ಯವಾಗಿ ಜ್ಯೋತಿಷ್ಯದ ಪ್ರಕಾರ ಒಬ್ಬ ವ್ಯಕ್ತಿಯು ಬೆಳಿಗ್ಗೆ ಎದ್ದು ಕನ್ನಡಿ ನೋಡಬಾರದು. ಈ ವಿಷಯಗಳನ್ನು ವಾಸ್ತುದಲ್ಲಿ ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಕನ್ನಡಿಯಲ್ಲಿ ಮುಖ ನೋಡಿಕೊಂಡು ಬೆಳಗಿನ ಜಾವ ಆರಂಭಿಸಬಾರದು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಇದು ನಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ ಮತ್ತು ಅದರ ಪರಿಣಾಮವು ವ್ಯಕ್ತಿಯ ಇಡೀ ದಿನದ ಮೇಲೆ ಬೀಳುತ್ತದೆ.

ಹೆಚ್ಚಿನ ಜನರು ಎದ್ದ ತಕ್ಷಣ ಕನ್ನಡಿಯಲ್ಲಿ ಮುಖ ನೋಡುವ ಅಭ್ಯಾಸವನ್ನು ಹೊಂದಿರುತ್ತಾರೆ ಆದರೆ ಇದನ್ನು ಮಾಡಬಾರದು. ವಾಸ್ತು ಶಾಸ್ತ್ರದ ಪ್ರಕಾರ, ನಾವು ಬೆಳಿಗ್ಗೆ ಎದ್ದಾಗ, ನಮ್ಮ ದೇಹದಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವ ಇರುತ್ತದೆ. ಇದರ ದೊಡ್ಡ ಪರಿಣಾಮ ನಮ್ಮ ಮುಖದ ಮೇಲಿರುತ್ತದೆ. ಎದ್ದ ತಕ್ಷಣ ಕನ್ನಡಿಯಲ್ಲಿ ಮುಖ ನೋಡಿಕೊಂಡರೆ ಆ ಶಕ್ತಿ ಮತ್ತೆ ನಮ್ಮೊಳಗೆ ಪ್ರವೇಶಿಸುತ್ತದೆ. ಆದ್ದರಿಂದ, ಬೆಳಿಗ್ಗೆ ಎದ್ದ ತಕ್ಷಣ ನಿಮ್ಮ ಮುಖವನ್ನು ಮೊದಲು ತೊಳೆಯಿರಿ ಮತ್ತು ನಂತರ ಕನ್ನಡಿ ನೋಡಲು ತಿಳಿಸಲಾಗಿದೆ.

ಯಾಕೆಂದರೆ ರಾತ್ರಿ ಮಲಗುವಾಗ ನಮ್ಮ ದೇಹಕ್ಕೆ ನೆಗೆಟಿವ್ ಎನರ್ಜಿ ತಗಲುತ್ತದೆ ಮತ್ತು ಬೆಳಗ್ಗೆ ಎದ್ದಾಗ ದೇಹಕ್ಕೆ ಆಲಸ್ಯ ಉಂಟಾಗುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ನಕಾರಾತ್ಮಕ ಶಕ್ತಿಯೊಂದಿಗೆ ಕನ್ನಡಿಯಲ್ಲಿ ನೋಡುವುದು ಮತ್ತೆ ನಿಮ್ಮಲ್ಲಿ ನಕಾರಾತ್ಮಕತೆಯನ್ನು ತುಂಬುತ್ತದೆ. ಮುಂಜಾನೆ ಎದ್ದು ಕನ್ನಡಿ ನೋಡುವುದರಿಂದ ಇಡೀ ರಾತ್ರಿಯ ಋಣಾತ್ಮಕತೆ ಮರಳಿ ಬರುತ್ತದೆ ಎಂದೂ ಹೇಳಲಾಗಿದೆ.

ಬೆಳಗ್ಗೆ ಎದ್ದು ಕನ್ನಡಿ ನೋಡುವ ಮುನ್ನ ಈ ರೀತಿ ಮಾಡುವುದು ಉತ್ತಮ :

  • ಮುಂಜಾನೆ ಎದ್ದು ಇಂತಹ ಕೆಲಸಗಳನ್ನು ಮಾಡುವುದರಿಂದ ನಮ್ಮ ದಿನವು ಉತ್ತಮವಾಗಿರುತ್ತದೆ ಮತ್ತು ಉತ್ಸಾಹದಿಂದ ಕೂಡಿರುತ್ತದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ. ಬೆಳಗ್ಗೆ ಎದ್ದ ತಕ್ಷಣ ಧ್ಯಾನ ಮಾಡಬೇಕು ಎಂದು ಹೇಳಲಾಗುತ್ತದೆ. ಅದರ ಅನೇಕ ಪ್ರಯೋಜನಗಳನ್ನು ಉಲ್ಲೇಖಿಸಲಾಗಿದೆ. ಧ್ಯಾನ ಮಾಡುವುದರಿಂದ ಮನಸ್ಸು ಏಕಾಗ್ರತೆ ಹೊಂದುತ್ತದೆ ಮತ್ತು ವ್ಯಕ್ತಿಯ ಮನಸ್ಸಿನಲ್ಲಿ ಒಳ್ಳೆಯ ಆಲೋಚನೆಗಳು ಬರುತ್ತವೆ. ಇದರೊಂದಿಗೆ ಧ್ಯಾನದಲ್ಲಿ ಕುಳಿತಾಗ ಅವರ ಇಷ್ಟ ದೇವನನ್ನು ನೆನಪಿಸಿಕೊಳ್ಳಬೇಕು. ಅವುಗಳನ್ನು ಧ್ಯಾನಿಸುವುದರಿಂದ ದಿನದ ಶುಭಾರಂಭವಾಗುತ್ತದೆ ಮತ್ತು ವ್ಯಕ್ತಿಯ ಮನಸ್ಸಿಗೆ ಶಾಂತಿ ಸಿಗುತ್ತದೆ.
  • ಬೆಳಗ್ಗೆ ಏಳುತ್ತಿದ್ದಂತೆ ನೀವು ಘಂಟಾ ನಾದ, ಶಂಖ, ಪೂಜೆ ಪುನಸ್ಕಾರದ ಶಬ್ಧವನ್ನು ಕೇಳಿದರೆ ಆ ದಿನವಿಡೀ ನಿಮಗೆ ಒಳ್ಳೆಯ ಕಾರ್ಯ ಸಿದ್ದಿಯಾಗಲಿದೆ.
  • ಬೆಳಗ್ಗೆ ಎದ್ದ ಕೂಡಲೇ ಹಾಲು ತುಂಬಿದ ಪಾತ್ರೆಯನ್ನು ನೋಡುವುದು ಶುಭಸೂಚಕ. ಇದು ನಿಮ್ಮ ಮೇಲೆ ಲಕ್ಷ್ಮಿ ಕಟಾಕ್ಷ ಇದೆ ಎಂಬುದನ್ನು ಸೂಚಿಸುತ್ತದೆ.
  • ನೀವು ಎದ್ದಾಗ ನೀರು ತುಂಬಿದ ಬಿಂದಿಗೆ ಕಾಣಿಸಿಕೊಂಡರೆ ಅದು ಕೂಡಾ ಬಹಳ ಶುಭ ಸಂಕೇತವಾಗಿದೆ.
  • ಹೂವು, ಹಣ್ಣು, ತೆಂಗಿನಕಾಯಿ, ತೆಂಗಿನ ಮರ ಹಾಗೂ ಕಾಮಧೇನುವನ್ನು ನೋಡಿದರೆ ಅದು ನಿಮಗೆ ಬಹಳ ಒಳ್ಳೆಯದು. ಕಾಮಧೇನು ಅಥವಾ ಹಸುವಿನಲ್ಲಿ 33 ಕೋಟಿ ದೇವತೆಗಳು ನೆಲೆಸಿದ್ದಾರೆ ಎಂಬ ನಂಬಿಕೆ ಇದೆ. ಆದ್ದರಿಂದ ನೀವು ಬೆಳಗ್ಗೆ ಎದ್ದ ಕೂಡಲೇ ಗೋವನ್ನು ನೋಡಿದರೆ ಅಥವಾ ಅದನ್ನು ಪೂಜಿಸಿದರೆ ಆ ದೇವತೆಗಳನ್ನೇ ಪೂಜಿಸಿದಂತಾಗುತ್ತದೆ.
  • ನೀವು ಎದ್ದ ಕೂಡಲೇ ಕೆಂಪು ಬಣ್ಣದ ಸೀರೆ ಉಟ್ಟ ಮುತ್ತೈದೆ ಕಾಣಿಸಿಕೊಂಡರೆ ಬಹಳ ಶುಭ, ಹಾಗೇ ನೀವು ಕೆಲಸದ ನಿಮಿತ್ತ ಹೊರಗೆ ಹೋಗುವಾಗ ಕೆಂಪು ಬಣ್ಣದ ಸೀರೆ ಧರಿಸಿರುವ ಮುತ್ತೈದೆ ನಿಮಗೆ ಎದುರಾದರೆ ಆ ಕೆಲಸದಲ್ಲಿ ನಿಶ್ಚಿತ ಜಯ ದೊರೆಯಲಿದೆ.

ಒಟ್ಟಾಗಿ ಹೇಳುವುದಾದರೆ ನೀವು ಬೆಳಿಗ್ಗೆ ಎದ್ದ ತಕ್ಷಣ ನಿಮ್ಮ ಅಂಗೈಗಳನ್ನು ನೋಡುವುದರಿಂದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ದರ್ಶನವಾಗುತ್ತದೆ. ಎಲ್ಲಾ ಮೂರು ದೇವತೆಗಳು ಅಂಗೈಗಳಲ್ಲಿ ನೆಲೆಸಿದ್ದಾರೆ ಎಂದು ಹೇಳಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ದಿನವನ್ನು ಮಂಗಳಕರವಾಗಿಸಲು ಅಂಗೈಗಳನ್ನು ನೋಡಿ ದೇವರ ನಾಮವನ್ನು ಜಪಿಸಿ. ಆದರೆ ಅಪ್ಪಿತಪ್ಪಿಯೂ ಕನ್ನಡಿ ನೋಡಬೇಡಿ ಎಂದು ವಾಸ್ತುವಿನಲ್ಲಿ ತಿಳಿಸಲಾಗಿದೆ.