CM Siddaramiah : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಂಸಹಾ ರಸ ಸೇವಿಸುವ ವಿಚಾರವಾಗಿ ಕೆಲವೊಮ್ಮೆ ತುಂಬಾ ಸುದ್ದಿಯಾಗುತ್ತಾರೆ. ಹಿಂದೊಮ್ಮೆ ಮಾಂಸಾಹಾರ ಸೇವಿಸಿ ಧರ್ಮಸ್ಥಳ ದೇವಸ್ಥಾನ ಪ್ರವೇಶಿಸಿದ್ದು ದೊಡ್ಡ ಸುದ್ದಿಯಾಗಿತ್ತು. ಆದರೆ ಇದು ಯಾವುದಕ್ಕೂ ಸಿದ್ದು ಕ್ಯಾರೆ ಎಂದಿರಲಿಲ್ಲ. ಅದು ನನ್ನಿಷ್ಟ, ನನ್ನ ವೈಯಕ್ತಿಕ ವಿಚಾರ ಎಂದು ಹೇಳಿ ಎಲ್ಲರ ಬಾಯಿ ಮುಚ್ಚಿಸಿದ್ದರು. ಇದೀಗ ವಿಧಾನಸಭಾ ಅಧಿವೇಶನದಲ್ಲಿಯೂ ಸಿಎಂ ಸಿದ್ದರಾಮಯ್ಯ ಮಾಂಸಹಾರ ವಿಚಾರವನ್ನು ಎತ್ತಿದ್ದು ‘ಯುಗಾದಿ ಹಾಗೂ ಶಿವರಾತ್ರಿಯಂದು ನಾನು ಮಾಂಸಹಾರ ಸೇವಿಸುತ್ತೇನೆ. ಏನಿವಾಗ?’ ಎಂದು ಪ್ರಶ್ನೆ ಮಾಡಿದ್ದಾರೆ.

ಕರ್ನಾಟಕ ಬಜೆಟ್ 2026 ಮಂಡನೆಗೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಹುಕಾಲ ಪರಿಶೀಲಿಸಿ ಸಮಯ ನಿಗದಿ ಮಾಡಿದ್ದಾರೆ ಎಂಬ ಪ್ರತಿಪಕ್ಷದ ಟೀಕೆ ವಿಧಾನಸಭೆಯಲ್ಲಿ ಕೆಲವೊಂದಿಷ್ಟು ಸ್ವಾರಸ್ಯಕರ ಚರ್ಚೆಗೆ ನಾಂದಿಯಾಯಿತು. ಈ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯನವರು, ಮನೆಯವರ ಒತ್ತಡಕ್ಕೆ ಹಾಗೂ ಅಧಿಕಾರಿಗಳ ಸಲಹೆ ಮೇರೆಗೆ ನಾನು ಆ ರೀತಿ ಮಾಡಿದೆ. ವೈಯಕ್ತಿಕವಾಗಿ ತಮಗೆ ರಾಹುಕಾಲ, ಗುಳಿಕಕಾಲ ಅಥವಾ ಇತರ ಗ್ರಹಣ ಕಾಲಗಳ ಬಗ್ಗೆ ಯಾವುದೇ ನಂಬಿಕೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಇದಲ್ಲದೆ, ಹಿಂದಿನ ಸಂದರ್ಭಗಳಲ್ಲಿ ರಾಹುಕಾಲದಲ್ಲೇ ಬಜೆಟ್ ಮಂಡಿಸಿರುವ ಉದಾಹರಣೆಗಳನ್ನೂ ಅವರು ಉಲ್ಲೇಖಿಸಿದರು.
ಅಲ್ಲದೆ ನಾನು ಎಂದಿಗೂ ಯಾವ ಕಾಲವನ್ನೂ ನೋಡಿಲ್ಲ, ಸೂರ್ಯಗ್ರಹಣವನ್ನೂ ನಾನು ನಂಬಿಲ್ಲ. ಯುಗಾದಿ ಹಬ್ಬದ ದಿನ ಯಾರಾದರೂ ಮಾಂಸಾಹಾರ ಸೇವಿಸುತ್ತಾರೇನ್ರಿ, ಶಿವರಾತ್ರಿಯ ದಿನ ಯಾರಾದರೂ ಮಾಂಸಾಹಾರ ಸೇವೆನೆ ಮಾಡುತ್ತಾರಾ.. ನಾನು ಯುಗಾದಿ – ಶಿವರಾತ್ರಿಯ ದಿನ ಮಾಂಸಾಹಾರ ತಿನ್ನುತ್ತೇನೆ ಎಂದು ಅವರು ಹೇಳಿದ್ದಾರೆ. ಇದರಲ್ಲಿ ಯಾವುದೇ ತಪ್ಪಿಲ್ಲ. ಎಲ್ಲ ದಿನಗಳೂ ಸಹ ಒಂದೇ, ಹಬ್ಬ ಎಂದು ಮಾಡುತ್ತೇವೆ ಅಷ್ಟೇ ಎಂದರು.
