Home News ಅಪರಿಚಿತ ಹೆಣಗಳ ತಾಣವಾಗುತ್ತಿದೆ ಶಿರಾಡಿ-ಬಿಸ್ಲೆ ಘಾಟ್!! ಗುರುತು ಸಿಗದಂತೆ ಕೊಂದು ಗೋಣಿಯಲ್ಲಿ ಕಟ್ಟಿಟ್ಟು ಬೀದಿ ಬದಿ...

ಅಪರಿಚಿತ ಹೆಣಗಳ ತಾಣವಾಗುತ್ತಿದೆ ಶಿರಾಡಿ-ಬಿಸ್ಲೆ ಘಾಟ್!! ಗುರುತು ಸಿಗದಂತೆ ಕೊಂದು ಗೋಣಿಯಲ್ಲಿ ಕಟ್ಟಿಟ್ಟು ಬೀದಿ ಬದಿ ಎಸೆಯುತ್ತಿರುವುದಾದರೂ ಯಾರು!??

Hindu neighbor gifts plot of land

Hindu neighbour gifts land to Muslim journalist

ರಾತ್ರಿಯಾದರೆ ಸಾಕು ಅಲ್ಲಿನ ಜನ ಒಂಟಿಯಾಗಿ ರಸ್ತೆಯಲ್ಲಿ ನಡೆದಾಡಲು ಭಯಪಡುತ್ತಾರೆ.ಯಾವ ಸಮಯದಲ್ಲಿ ಏನಾಗುತ್ತದೋ ಎಂದು ಭಯದಲ್ಲಿಯೇ ದಿನ ದೂಡುತ್ತಿದ್ದಾರೆ. ಯಾಕೆಂದರೆ ಆ ಪ್ರದೇಶದಲ್ಲಿ ಅಪರಿಚಿತ ಶವಗಳು ಒಂಚೂರು ಗುರುತು ಸಿಗದ ರೀತಿಯಲ್ಲಿ ಪತ್ತೆಯಾಗುತ್ತಿವೆ.

ಕಳೆದೆರಡು ದಿನಗಳ ಹಿಂದೆ ಸಕಲೇಶಪುರ ತಾಲೂಕಿನ ಮಾರನಹಳ್ಳಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ಅಪರಿಚಿತ ಮಹಿಳೆಯೊಬ್ಬರ ಶವ ಪತ್ತೆಯಾಗಿದ್ದು, ಈ ವರೆಗೂ ಆಕೆ ಯಾರೆಂಬುವುದನ್ನು ಪತ್ತೆ ಹಚ್ಚಲು ಆಗಿಲ್ಲ. ಯಾರೋ ಕೊಲೆಗಡುಕರು ನಿರ್ದಯವಾಗಿ ಕೊಲೆ ನಡೆಸಿ ರಸ್ತೆ ಬದಿ ಎಸೆದು ಹೋಗಿದ್ದಾರೆ ಎನ್ನಲಾಗುತ್ತಿದೆ.

ಅದಲ್ಲದೇ ಬಿಸಿಲೆ ಘಾಟ್ ವ್ಯಾಪ್ತಿಯ ಹಿಜ್ಜನಹಳ್ಳಿ ಎಂಬಲ್ಲಿ ಗೋಣಿಚೀಲವೊಂದರಲ್ಲಿ ಕಟ್ಟಿಟ್ಟ ವ್ಯಕ್ತಿಯೊಬ್ಬರ ಕೊಳೆತ ಶವ ಪತ್ತೆಯಾಗಿದ್ದು, ಈ ವರೆಗೂ ಮೃತದೇಹದ ಗುರುತು ಪತ್ತೆಯಾಗಿಲ್ಲ. ಮೊನ್ನೆಯ ದಿನ ಶೀರಾಡಿ ಘಾಟ್ ಕಾಡಿನಲ್ಲಿ ಮಹಿಳೆಯೊಬ್ಬರ ಶವವೂ ಗುರುತು ಸಿಗದ ರೀತಿಯಲ್ಲಿ ಪತ್ತೆಯಾಗಿದ್ದು ಸಾರ್ವಜನಿಕರನ್ನು ಮತ್ತಷ್ಟು ಆತಂಕಕ್ಕೆ ತಳ್ಳಿದೆ.

ಪ್ರವಾಸಿ ತಾಣಗಳ ಬಳಿಯಲ್ಲಿ ಈ ರೀತಿ ಅಪರಿಚಿತ ಶವ ಕಂಡುಬರುವುದರಿಂದ ಗಾಬರಿಗೊಂಡಿರುವ ಸ್ಥಳೀಯ ನಿವಾಸಿಗಳಿಗೆ ಪೊಲೀಸ್ ಇಲಾಖೆ ಧೈರ್ಯ ತುಂಬುವ ಕಾರ್ಯ ಮಾಡಬೇಕಾಗಿದೆ. ಒಟ್ಟಿನಲ್ಲಿ ಕಳೆದ ಕೆಲ ಸಮಯಗಳಿಂದ ಈ ಭಾಗದಲ್ಲಿ ಕಂಡುಬರುತ್ತಿರುವ ಅಪರಿಚಿತ ಶವಗಳ ಹಿಂದೆ ಆತ್ಮಹತ್ಯೆ/ಕೊಲೆಯೋ ಎಂಬ ಬಗ್ಗೆ ಒಂದು ಸಣ್ಣ ಸುಳಿವು ಕೂಡಾ ಇಲ್ಲ. ಈ ಬಗ್ಗೆ ತನಿಖೆ ಆಗಬೇಕಾಗಿದ್ದು, ಪ್ರಶ್ನೆ ಹುಟ್ಟುಹಾಕುತ್ತಿರುವ ಅಪರಿಚಿತ, ಗುರುತು ಸಿಗದ ಶವಗಳಿಂದಾಗಿ ಸಾರ್ವಜನಿಕರಲ್ಲಿ ಭೀತಿ ಉಂಟಾಗಿದೆ.