Home » Ujire: ಉಜಿರೆ ಜನಾರ್ದನ ಸ್ವಾಮಿ ಬ್ರಹ್ಮಕಲಥೋತ್ಸವ -ಆಡಳಿತ ಮೋಕೆಸ್ತರ ಶರತ್ ಕೃಷ್ಣ ಪಡ್ವೆಟ್ನಾಯರಿಂದ ‘ನಮ್ಮೂರ ದೇವರು’ ಭಕ್ತಿ ಗೀತೆ ಲೋಕಾರ್ಪಣೆ

Ujire: ಉಜಿರೆ ಜನಾರ್ದನ ಸ್ವಾಮಿ ಬ್ರಹ್ಮಕಲಥೋತ್ಸವ -ಆಡಳಿತ ಮೋಕೆಸ್ತರ ಶರತ್ ಕೃಷ್ಣ ಪಡ್ವೆಟ್ನಾಯರಿಂದ ‘ನಮ್ಮೂರ ದೇವರು’ ಭಕ್ತಿ ಗೀತೆ ಲೋಕಾರ್ಪಣೆ

0 comments

Ujire: ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ದಿನಗಡನೆ ಆರಂಭವಾಗಿದ್ದು ಎಲ್ಲೆಡೆ ಸಂಭ್ರಮ ಮನೆ ಮಾಡಿದೆ. ಬ್ರಹ್ಮಕಲಶಕ್ಕೆ ಈಗಾಗಲೇ ಭರದಿಂದ ತಯಾರಿಗಳು ನಡೆದಿದ್ದು, ಉಜಿರೆ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಈಗ ಜನರ ಕಷ್ಟಗಳಿಗೆ ಮರುಗುವ ಉಜರೆಯ ಶ್ರೀ ಜನಾರ್ದನ ಸ್ವಾಮಿ ಮಹಿಮೆಯನ್ನು ಸಾರುವ ‘ನಮ್ಮೂರ ದೇವರು’ ಎಂಬ ಭಕ್ತಿ ಗೀತೆ ಲೋಕಾರ್ಪಣೆಗೊಂಡಿದೆ.

ಫೆ.23 ರಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೋಕೆಸ್ತರರಾದ ಶರತ್ ಕೃಷ್ಣ ಪಡ್ವೇಟ್ನಾಯ ಅವರು ಗೀತೆಯನ್ನು ಅಧಿಕೃತವಾಗಿ ಲೋಕಾರ್ಪಣೆಗೊಳಿಸಿ, ಶುಭ ಹಾರೈಸಿದರು. ದಿನೇಶ್ ಕೋಟ್ಯಾನ್ ಅವರು “ನಮ್ಮೂರ ದೇವರು” ಎಂಬ ಈ ಅದ್ಭುತ ಭಕ್ತಿಗೀತೆಯನ್ನು ರಚಿಸಿ ದೇವರಿಗೆ ಅರ್ಪಿಸಿದ್ದಾರೆ.

ಕಾರ್ಯಕ್ರಮದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಪ್ರತಾಪ್ ಸಿಂಹ ನಾಯಕ್, ಗೋಪುರ ನಿರ್ಮಾಣ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಸಂಚಾಲಕರಾದ ಕೆ. ಮೋಹನ್ ಕುಮಾ‌ರ್, ಭಕ್ತಿಗೀತೆ ರಚಿಸಿರುವ ದಿನೇಶ್ ಕೋಟ್ಯಾನ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

You may also like