Home News Godman Nityananda: ಬುಡಕಟ್ಟು ಜನರ 4.80 ಲಕ್ಷ ಹೆಕ್ಟೇರ್ ಭೂಮಿ ಗುಳುಂ: ಸ್ವಘೋಷಿತ ದೇವಮಾನವ ನಿತ್ಯಾನಂದನ...

Godman Nityananda: ಬುಡಕಟ್ಟು ಜನರ 4.80 ಲಕ್ಷ ಹೆಕ್ಟೇರ್ ಭೂಮಿ ಗುಳುಂ: ಸ್ವಘೋಷಿತ ದೇವಮಾನವ ನಿತ್ಯಾನಂದನ ಕಥೆ ಕೈಲಾಸ

Hindu neighbor gifts plot of land

Hindu neighbour gifts land to Muslim journalist

Godman Nityananda: ಭಾರತದಲ್ಲಿ ಅತ್ಯಾಚಾರ ಆರೋಪವನ್ನು(Rape case) ಹೊತ್ತು ‘ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ'(United States of Kailasa) ಎಂಬ ಸ್ವಂತ ರಾಷ್ಟ್ರ ಸ್ಥಾಪಿಸಿದ್ದ ಸ್ವಘೋಷಿತ ದೇವಮಾನವ ನಿತ್ಯಾನಂದ, ಬೊಲಿವಿಯಾದ(Bolivia) ಬುಡಕಟ್ಟು(tribes) ಜನರಿಂದ 4.80 ಲಕ್ಷ ಹೆಕ್ಟೇ‌ರ್ ಭೂಮಿಯನ್ನು ವಂಚನೆಯ ಮೂಲಕ ಗುತ್ತಿಗೆಗೆ ಪಡೆದಿದ್ದಾರೆ ಎಂದು ವರದಿಯಾಗಿದೆ. “ಕೈಲಾಸದೊಂದಿಗೆ ಬೊಲಿವಿಯಾ ಯಾವುದೇ ಸಂಬಂಧ ಹೊಂದಿಲ್ಲ” ಎಂದು ಬೊಲಿವಿಯಾ ಸ್ಪಷ್ಟಪಡಿಸಿದೆ. ಭೂ ಖರೀದಿ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಖರೀದಿ ಒಪ್ಪಂದ ರದ್ದುಗೊಳಿಸಲಾಗಿದೆ ಎಂದು ವರದಿ ಹೇಳಿದೆ.

2019 ರಲ್ಲಿ ಭಾರತದಿಂದ ಪಲಾಯನ ಮಾಡಿ “ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ” ಎಂಬ ಸಾರ್ವಭೌಮ ರಾಷ್ಟ್ರವನ್ನು ಸ್ಥಾಪಿಸಿರುವುದಾಗಿ ಹೇಳಿಕೊಂಡಿರುವ ಸ್ವಯಂ ಘೋಷಿತ ದೇವಮಾನವ ಮತ್ತು ದೇಶಭ್ರಷ್ಟ ನಿತ್ಯಾನಂದ, ಇಡೀ ಜಗತ್ತನ್ನು ಬೆಚ್ಚಿಬೀಳಿಸುವ ಜಾಗತಿಕ ಭೂ ಹಗರಣದ ಭಾಗವಾಗಿದ್ದಾನೆ.

ಒಂದು ಅಸಂಬದ್ಧ ಮತ್ತು ಎಳ್ಳಷ್ಟು ಪ್ರಯೋಜನ ಇಲ್ಲದೆ, ಬೊಲಿವಿಯಾದ ಅಮೆಜಾನ್ ಮಳೆಕಾಡಿನ(Amazon rainforest) ಮೂರು ಸ್ಥಳೀಯ ಬುಡಕಟ್ಟು ಜನಾಂಗದವರು ನಿತ್ಯಾನಂದನ ಅಸ್ತಿತ್ವದಲ್ಲಿಲ್ಲದ ದೇಶದೊಂದಿಗೆ ಭೂ-ಗುತ್ತಿಗೆ ಒಪ್ಪಂದಗಳಿಗೆ ಸಹಿ ಹಾಕುವಂತೆ ಮೋಸಗೊಳಿಸಲಾಗಿದೆ.

ವರದಿಯ ಪ್ರಕಾರ, “ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ” ಈ ಬುಡಕಟ್ಟು ಜನಾಂಗದವರನ್ನು 3,900 ಚದರ ಮೀಟರ್ ಅಮೆಜಾನ್ ಭೂಮಿಗೆ 1,000 ವರ್ಷಗಳ ಗುತ್ತಿಗೆ ಒಪ್ಪಂದಕ್ಕೆ ಸಹಿ ಹಾಕುವಂತೆ ವಂಚಿಸಿತು. ಪ್ರಶ್ನಾರ್ಹ ಭೂಮಿ ದೆಹಲಿಯ 2.6 ಪಟ್ಟು, ಮುಂಬೈನ 6.5 ಪಟ್ಟು, ಬೆಂಗಳೂರಿನ 5.3 ಪಟ್ಟು, ಕೋಲ್ಕತ್ತಾದ 19 ಪಟ್ಟು ದೊಡ್ಡದಾಗಿದೆ.