Home News ಕಾರಿಗೆ ಲಾರಿ ಗುದ್ದಿ ಭೀಕರ ರಸ್ತೆ ಅಪಘಾತ! ಸ್ನೇಹಿತರಿಬ್ಬರ ಮರಣ

ಕಾರಿಗೆ ಲಾರಿ ಗುದ್ದಿ ಭೀಕರ ರಸ್ತೆ ಅಪಘಾತ! ಸ್ನೇಹಿತರಿಬ್ಬರ ಮರಣ

Hindu neighbor gifts plot of land

Hindu neighbour gifts land to Muslim journalist

Bidar: ತೆಲಂಗಾಣದ (Telangana) ಜಹೀರಾಬಾದ್ ಬಳಿ ಲಾರಿಗೆ ಹಿಂಬದಿಯಿಂದ ಕಾರು (Car) ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಬೀದರ್ (Bidar) ಮೂಲದ ಇಬ್ಬರು ಯುವಕರು ದಾರುಣವಾಗಿ ಮೃತಪಟ್ಟ ಘಟನೆ ವರದಿಯಾಗಿದೆ.

ಯುವಕರು ಬೀದರ್ ನಿಂದ ಹೈದರಾಬಾದ್‍ಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಕಾರು ನಿಯಂತ್ರಣ ತಪ್ಪಿದ್ದು, ಹೀಗಾಗಿ ಮುಂದೆ ಸಾಗುತ್ತಿದ್ದ ಲಾರಿಗೆ ರಭಸವಾಗಿ ಡಿಕ್ಕಿಯಾಗಿದ್ದು, ಜಹೀರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಈ ವೇಳೆ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದು, ಮೃತರನ್ನು ಅವಿನಾಶ್ ಗೋಡೆ (27) ಹಾಗೂ ವೀರೇಶ್ (30) ಎಂದು ಗುರುತಿಸಲಾಗಿದೆ. ಈ ಇಬ್ಬರು ಯುವಕರು ಔರಾದ್‍ನ ನಾಗಮಾರಪ್ಪಳ್ಳಿ ಗ್ರಾಮದ ವಾಸಿಗಳು ಎನ್ನಲಾಗಿದೆ.