Home latest ಹುಣಸೆ ಹಣ್ಣು ಕೊಯ್ಯುವ ವಿಚಾರ ಸಹೋದರರಿಬ್ಬರ ಮಧ್ಯೆ ಮಾರಾಮಾರಿ!! ಓಟೆ ಪುಳಿಯ ಜಗಳದಲ್ಲಿ ಸೋಂಟೆಯಿಂದ ಗಂಭೀರ...

ಹುಣಸೆ ಹಣ್ಣು ಕೊಯ್ಯುವ ವಿಚಾರ ಸಹೋದರರಿಬ್ಬರ ಮಧ್ಯೆ ಮಾರಾಮಾರಿ!! ಓಟೆ ಪುಳಿಯ ಜಗಳದಲ್ಲಿ ಸೋಂಟೆಯಿಂದ ಗಂಭೀರ ಹಲ್ಲೆ-ಗಾಯಾಳು ಆಸ್ಪತ್ರೆಗೆ

Hindu neighbor gifts plot of land

Hindu neighbour gifts land to Muslim journalist

ಹುಣಸೆ ಹಣ್ಣು ಎಂದರೆ ಎಂತಹವರ ಬಾಯಲ್ಲೂ ಒಂದು ಕ್ಷಣ ನೀರೂಸುವುದು ಖಂಡಿತ. ಆದರೆ ಯಾದಗಿರಿ ಜಿಲ್ಲೆಯಲ್ಲಿ ಹುಣಸೆ ಹಣ್ಣಿಗಾಗಿ ಸಹೋದರರಿಬ್ಬರ ಮಧ್ಯೆ ಮಾರಾಮಾರಿ ನಡೆದಿದ್ದು ಗಂಭೀರ ಸ್ವರೂಪದ ಹಲ್ಲೆ ನಡೆಸಿದ್ದಾರೆ ಎಂದು ಠಾಣೆಯಲ್ಲಿ ದೂರು ದಾಖಲಾಗಿದೆ.

ಹಲ್ಲೆಗೊಳಗಾದ ಫಿರ್ ಖಾನ್ ಎಂಬವರು ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.

ಘಟನೆ ವಿವರ: ಗಾಯಳು ಫಿರ್ ಖಾನ್ ಗೆ ಪಾಲಿನಲ್ಲಿ ಬಂದಿದ್ದ ಹೊಲದಲ್ಲಿದ್ದ ಹುಣಸೆ ಮರದಿಂದ ಖಾನ್ ಸಹೋದರನಾದ ಖಾಜಾಹುಸೇನ್ ಹಾಗೂ ಆತನ ಪುತ್ರ ಹಬೀಬ್ ಹುಣಸೆ ಹುಳಿಯನ್ನು ಕೊಯ್ಯುತ್ತಿದ್ದರು. ಈ ವಿಷಯ ತಿಳಿದು ಸ್ಥಳಕ್ಕೆ ಬಂದ ಫಿರ್ ಖಾನ್ ತನ್ನ ಆಸ್ತಿಯಲ್ಲಿರುವ ಮರದಿಂದ ಪ್ರತೀ ಬಾರಿಯೂ ನೀವೇ ತೆಗೆದುಕೊಳ್ಳುತ್ತೀರಿ, ಈ ಬಾರಿ ನನಗೆ ಬೇಕೆಂದು ಕೇಳಿದ್ದಾರೆ.

ಇದೇ ವಿಚಾರವಾಗಿ ಮಾತಿಗೆ ಮಾತು ಬೆಳೆದಿದ್ದು ಕೈ ಮಿಲಾಯಿಸುವ ಮಟ್ಟಕ್ಕೂ ತಲುಪಿದೆ. ಈ ವೇಳೆ ಸಹೋದರ ಹಾಗೂ ಆತನ ಪುತ್ರ ಸೇರಿ ಫಿರ್ ಖಾನ್ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದು ಗಾಯಗೊಂಡಿದ್ದಾರೆ. ಸದ್ಯ ಖಾನ್ ಆಸ್ಪತ್ರೆಗೆ ದಾಖಲಾಗಿದ್ದು ಪೊಲೀಸರಿಗೆ ದೂರು ನೀಡಲಾಗಿದೆ.