Home News ಸುಳ್ಯ : ನಾಪತ್ತೆಯಾದ ಗ್ರಾ.ಪಂ.ಸದಸ್ಯೆ ಹಾಗೂ ನೆರೆಮನೆಯ ವ್ಯಕ್ತಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

ಸುಳ್ಯ : ನಾಪತ್ತೆಯಾದ ಗ್ರಾ.ಪಂ.ಸದಸ್ಯೆ ಹಾಗೂ ನೆರೆಮನೆಯ ವ್ಯಕ್ತಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

Hindu neighbor gifts plot of land

Hindu neighbour gifts land to Muslim journalist

ಸುಳ್ಯ : ಗ್ರಾ.ಪಂ. ಸದಸ್ಯೆಯಾಗಿರುವ ಮಹಿಳೆಯನ್ನು ವ್ಯಕ್ತಿಯೋರ್ವ ಸೇತುವೆಯಿಂದ ನದಿಗೆ ತಳ್ಳಿ ಹಾಕಿದ ಮತ್ತು ಇಬ್ಬರೂ ಕಾಣೆಯಾದ ಘಟನೆಗೆ ಸಂಬಂಧಿಸಿದಂತೆ ಈಗ ಅವರು ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಸುಳ್ಯ ತಾಲೂಕಿನ ಅಂಚಿನಲ್ಲಿರುವ ಕೊಡಗಿನ ಚೆಂಬು ಗ್ರಾಮ ಪಂಚಾಯತ್‌ನ ಸದಸ್ಯೆ ದಬ್ಬಡ್ಕ ಕಮಲ ಎಂಬವರು ನಿನ್ನೆ ಸಂಜೆ ಇತರರೊಂದಿಗೆ ಹತ್ತಿರದ ಮನೆಯ ಕಾರ್ಯಕ್ರಮಕ್ಕೆ ಹೋಗುತ್ತಿದ್ದಾಗ ದಬ್ಬಡ್ಕ ಸೇತುವೆ ಮೇಲೆ ನೆರೆ ಮನೆಯ ಮುತ್ತು ಎಂಬಾತ ಆಕೆಯನ್ನು ಸೇತುವೆಯಿಂದ ಕೆಳಗೆ ತಳ್ಳಿ ಹಾಕಿದನೆನ್ನಲಾಗಿದೆ.ಬಳಿಕ ಮುತ್ತು ಕೂಡಾ ನಾಪತ್ತೆಯಾಗಿದ್ದು, ಕಮಲ ಅವರ ಸುಳಿವು ಕೂಡ ದೊರೆತಿಲ್ಲ.

ಇದೀಗ ಇವರಿಬ್ಬರೂ ಶವವಾಗಿ ಪತ್ತೆಯಾಗಿದ್ದಾರೆ.