Home » SBI ಮ್ಯಾನೇಜರ್ ವರ್ಗಾವಣೆ: ನಾನ್ಸೆನ್ಸ್ ಎಂದು ತನ್ನ ಕಂಪೆನಿಯನ್ನು ಪುಣೆಗೆ ವರ್ಗಾಯಿಸಿದ ಉದ್ಯಮಿ

SBI ಮ್ಯಾನೇಜರ್ ವರ್ಗಾವಣೆ: ನಾನ್ಸೆನ್ಸ್ ಎಂದು ತನ್ನ ಕಂಪೆನಿಯನ್ನು ಪುಣೆಗೆ ವರ್ಗಾಯಿಸಿದ ಉದ್ಯಮಿ

0 comments

Bengaluru : ಬೆಂಗಳೂರು ಎಸ್ ಬಿ ಐ ಮ್ಯಾನೇಜರ್ ಕನ್ನಡ ವಿರೋಧಿ ತನದಿಂದ ವರ್ಗಾವಣೆಗೊಂಡ ಬೆನ್ನ ಹಿಂದೆಯೇ, ಬೆಂಗಳೂರು ಮೂಲದ ತಂತ್ರಜ್ಞಾನ ಸ್ಥಾಪಕರೊಬ್ಬರು ತಮ್ಮ ಕಂಪೆನಿಯ ಕಚೇರಿಯನ್ನು 6 ತಿಂಗಳ ಒಳಗಾಗಿ ಪುಣೆಗೆ ಶಿಫ್ಟ್ ಮಾಡುವ ಕುರಿತಾಗಿ ತಿಳಿಸಿದ್ದಾರೆ.

ಇಲ್ಲಿ ತನ್ನ ಭಾಷೆ ಬರದ ಸಿಬ್ಬಂದಿಗಳು ಕೆಲಸ ಮಾಡುವುದರಿಂದ ಮುಂದೆ ಅವರಿಗೂ ಕಷ್ಟ ಆಗಬಹುದು, ಇದಕ್ಕೆಲ್ಲ ಈ ಭಾಷಾ ಅಸಂಬದ್ಧತೆಯೇ ಕಾರಣ ಎಂದಿರುವ ಅವರು, ತಮ್ಮ ಸಿಬ್ಬಂದಿಗಳು ಕಳವಳ ವ್ಯಕ್ತ ಪಡಿಸಿರುವುದರಿಂದ ತಾನು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಹಾಗೂ ಸಿಬ್ಬಂದಿಗಳ ಕಳವಳದ ದೃಷ್ಟಿಕೋನ ಸರಿಯಾಗಿಯೇ ಇದೆ ಎಂದು ಕೌಶಿಕ್ ಮುಖರ್ಜಿ ತಮ್ಮ ಎಕ್ಸ್ (X) ನಲ್ಲಿ ಬರೆದುಕೊಂಡಿದ್ದಾರೆ.

ಕರ್ನಾಟಕದಲ್ಲಿ ಕನ್ನಡ ಮಾತನಾಡದೆ ಇರುವುದು ಗ್ರಾಹಕರಿಗೆ ಸಮಸ್ಯೆ ಉಂಟು ಮಾಡುತ್ತದೆ ಇದು ಸರಿಯಲ್ಲ ಎಂಬುದರ ಕುರಿತಾಗಿ ಟ್ವೀಟ್ ಮಾಡಿದ್ದಂತದ ಸಂಸದ ತೇಜಸ್ವಿ ಸೂರ್ಯ ಅವರ ಟ್ವೀಟ್ ಗೆ ಪ್ರತಿಕ್ರಿಯೆಯಾಗಿ ಕೌಶಿಕ್ ಪೋಸ್ಟ್ ಮಾಡಿರುತ್ತಾರೆ.

ಸಿಬ್ಬಂದಿಗಳಿಗೆ ಕನ್ನಡ ಕಲಿಸಲು ಮುಂದಾದ SBI

banner

 

ಕರಾವಳಿಗೆ ಚಂಡಮಾರುತದ ಭೀತಿ; ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನೆಲೆ!

 

You may also like