Home » Prakash Raj: RCB ನಾಯಕಿ ಸ್ಮೃತಿ ಮಂದಾನ ಹೊಗಳಿ ಪೋಸ್ಟ್ – ಅತ್ಯಂತ ಅಸಹ್ಯಕರ ಎಂದ ಪ್ರಕಾಶ್‌ ರಾಜ್‌

Prakash Raj: RCB ನಾಯಕಿ ಸ್ಮೃತಿ ಮಂದಾನ ಹೊಗಳಿ ಪೋಸ್ಟ್ – ಅತ್ಯಂತ ಅಸಹ್ಯಕರ ಎಂದ ಪ್ರಕಾಶ್‌ ರಾಜ್‌

0 comments

Prakash Raj: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಹಿಳಾ ಮಣಿಗಳು 2ನೇ ಬಾರಿಗೆ ಆರ್‌ಸಿಬಿ ಕಪ್ ಗೆದ್ದು ದಾಖಲೆ ಬರೆದಿದ್ದಾರೆ. ಈ ಗೆಲುವಿನ ಸಂಭ್ರಮವನ್ನು ತಂಡದ ನಾಯಕಿ ಸ್ಮೃತಿ ಮಂದಾನ ಪೋಸ್ಟ್ ಮಾಡಿದ್ದು, ಈ ಪೋಸ್ಟ್ ಗೆ ನಟ ಪ್ರಕಾಶ್ ರಾಜ್ ಕಿಡಿಕರಿದ್ದಾರೆ. 

ಯಸ್, ಎರಡನೇ ಬಾರಿಗೆ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯೂಪಿಎಲ್) ಪ್ರಶಸ್ತಿಯನ್ನು ಗೆದ್ದ ನಂತರ, ಸೋಶಿಯಲ್‌ ಮೀಡಿಯಾದಲ್ಲಿ ಆರ್‌ಸಿಬಿ ಟೀಮ್‌ ಹಾಗೂ ಸ್ಮೃತಿ ಮಂಧನಾ ನಾಯಕತ್ವವನ್ನು ಹೊಗಳಿ ಅನೇಕ ಟ್ವಿಟ್ ಮಾಡಿದ್ದರು. ಇವುಗಳಲ್ಲಿ ಒಂದು ಪೋಸ್ಟ್ ನಲ್ಲಿ ಹಿಂದೂ ಧರ್ಮಕ್ಕೆ ಮೀಕರಿಸಿ ಆರ್‌ಸಿಬಿ ಗೆಲುವನ್ನು ಹೊಗಳಲಾಗಿತ್ತು. ಈ ಪೋಸ್ಟ್‌ಅನ್ನು ರಿಪೋಸ್ಟ್‌ ಮಾಡಿರುವ ನಟ ಹಾಗೂ ನಿರ್ದೇಶಕ ಪ್ರಕಾಶ್‌ ರಾಜ್‌, ಇದೊಂದು ಅಸಹ್ಯಕರ ಪೋಸ್ಟ್‌ ಎಂದು ಹೇಳಿದ್ದಾರೆ.

ಪೋಸ್ಟ್‌ನಲ್ಲಿ, X (ಹಿಂದಿನ ಟ್ವಿಟರ್) ಖಾತೆಯು ಮಂಧಾನ ಅವರ ಗೆಲುವಿಗೆ ತಿರುಪತಿ ಬಾಲಾಜಿಯ ಆಶೀರ್ವಾದ ಕಾರಣ ಎಂದು ಹೇಳಿಕೊಂಡಿದೆ. “ಜೀಸಸ್ ಜೆಮಿಮಾ ರೊಡ್ರಿಗಸ್‌ಗೆ ಸಹಾಯ ಮಾಡಲಿಲ್ಲ, ಆದರೆ ತಿರುಪತಿ ಬಾಲಾಜಿ ಸ್ಮೃತಿ ಮಂದನಾಗೆ ತಮ್ಮ ಆಶೀರ್ವಾದ ನೀಡಿದರು! WPL 2026 ಗೆದ್ದಿದ್ದಕ್ಕಾಗಿ RCB ಗೆ ಅಭಿನಂದನೆಗಳು,” ಎಂದು ಪೋಸ್ಟ್‌ನಲ್ಲಿ ಬರೆಯಲಾಗಿತ್ತು. ಈ ಪೋಸ್ಟ್‌ಗೆ ತೀವ್ರವಾಗಿ ಪ್ರತಿಕ್ರಿಯಿಸಿದ ಪ್ರಕಾಶ್ ರಾಜ್, “ಕೊಳೆತ ಮನಸ್ಸು” ಮಾತ್ರ ಇಂತಹ “ಅಸಹ್ಯಕರ” ಪೋಸ್ಟ್ ಅನ್ನು ಪೋಸ್ಟ್ ಮಾಡಲು ಸಾಧ್ಯ ಎಂದು ಬರೆದಿದ್ದಾರೆ. “ಅಸಹ್ಯಕರ… ಕೊಳೆತ ಮನಸ್ಸು ಮಾತ್ರ ಹೀಗೆ ಯೋಚಿಸಬಲ್ಲದು… ನಾವು ಇಲ್ಲಿಗೆ ಬಂದಿದ್ದೇವೆಯೇ?” ನಟ ಪ್ರಕಾಶ್ ರಾಜ್ ಎಕ್ಸ್‌ನಲ್ಲಿ ಬರೆದಿದ್ದಾರೆ.

You may also like