Home latest National Award Medal: ರಾಷ್ಟ್ರ ಪ್ರಶಸ್ತಿ ಹಿಂದಿರುಗಿಸಿದ ಕಳ್ಳ

National Award Medal: ರಾಷ್ಟ್ರ ಪ್ರಶಸ್ತಿ ಹಿಂದಿರುಗಿಸಿದ ಕಳ್ಳ

National Award Medal

Hindu neighbor gifts plot of land

Hindu neighbour gifts land to Muslim journalist

National Award Medal: ಕಾಕ ಮುಟೈ ಚಿತ್ರದ ಮೂಲಕ ತಮಿಳು ಚಿತ್ರರಂಗದಲ್ಲಿ ನಿರ್ದೇಶಕರಾಗಿ ಹೆಸರು ಮಾಡಿದ್ದ ಮಣಿಕಂದನ್ ಅವರು ‘ಕಟೈಸಿ ಕಾರ್ಯಂ’, ‘ಕುರಮೆ ಸಂಯಂ’, ‘ಆಂಡವನ್ ಕೊಮ್ಮಂಡಿ’ ಮುಂತಾದ ಗುಣಮಟ್ಟದ ಚಿತ್ರಗಳನ್ನು ನಿರ್ದೇಶನ ಮಾಡಿ ಭಾರೀ ಹೆಸರು ಗಳಿಸಿದ ನಿರ್ದೇಶಕ. ‘Kadasi Vivasayi’ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. ಈ ನಡುವೆ ಕಳೆದ ವಾರ (ಫೆ.8) ಉಸಿಲಂಬಟ್ಟಿಯ ಅವರ ಮನೆಯಲ್ಲಿ ದರೋಡೆ ನಡೆಸಿದ ಘಟನೆ ನಡೆದಿದ್ದು, ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು. ಮಣಿಕಂದನ್ ಅವರು ತಮ್ಮ ಮುಂದಿನ ಚಿತ್ರದ ಕೆಲಸಕ್ಕಾಗಿ ಕುಟುಂಬ ಸಮೇತ ಚೆನ್ನೈನಲ್ಲಿದ್ದಾಗ ಕೆಲ ದುಷ್ಕರ್ಮಿಗಳು ಅವರ ಉಸಿಲಂಬಟ್ಟಿ ಮನೆಯ ಬೀಗ ಒಡೆದು ಕಳ್ಳತನ ಮಾಡಿ ದೋಚಿದ್ದಾರೆ.

ಇದನ್ನೂ ಓದಿ: Belthangady: 42 ಸಿಮ್‌ ಕಾರ್ಡ್‌ ಪತ್ತೆ ಪ್ರಕರಣ; ವಿದೇಶಿ ಕರೆನ್ಸಿ ದಂಧೆಯ ಗುಮಾನಿ, ಇಡಿ ಸಂಸ್ಥೆ ಎಂಟ್ರಿ

ಈ ವೇಳೆ 5 ಪೌಂಡ್ ಚಿನ್ನಾಭರಣ, 1 ಲಕ್ಷ ರೂಪಾಯಿ ನಗದು ಹಾಗೂ ಮಣಿಕಂದನ್ ಅವರಿಗೆ ರಾಷ್ಟ್ರ ಪ್ರಶಸ್ತಿಗಾಗಿ ನೀಡಲಾಗಿದ್ದ ಎರಡು ಬೆಳ್ಳಿ ಪದಕಗಳನ್ನು ಕಳ್ಳತನ ಮಾಡಿದ್ದರು.

ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ವೇಳೆ ಮಣಿಕಂದನ್ ಅವರ ಮನೆಯಲ್ಲಿ ಕದ್ದಿದ್ದ 2 ರಾಷ್ಟ್ರಪ್ರಶಸ್ತಿಗಳನ್ನು ಕಳ್ಳರು ಮತ್ತೆ ಅವರ ಮನೆ ಮುಂದೆ ಕ್ಷಮಾಪಣೆ ಪತ್ರದೊಂದಿಗೆ ಇಟ್ಟುಕೊಂಡಿದ್ದಾರೆ. ಪಾಲಿಥಿನ್ ಚೀಲದಲ್ಲಿ ಪದಕಗಳನ್ನು ಮಾತ್ರ ಇಟ್ಟುಕೊಂಡಿರುವವರು, ‘ನಮ್ಮನ್ನು ಕ್ಷಮಿಸಿ ಸಾರ್, ನಿಮ್ಮ ಶ್ರಮ ನಿಮ್ಮದು’ ಎಂದು ಪತ್ರದಲ್ಲಿ ಬರೆದಿದ್ದಾರೆ. ನಿಜಕ್ಕೂ ಈ ಸುದ್ದಿ ಇದೀಗ ಆ ಪ್ರದೇಶದಲ್ಲಿ ಸಂಚಲನ ಮೂಡಿಸಿದೆ.

ಕಾಕ ಮುಟೈ ಮೂಲಕ ಮಿಂಚಿದ ಮಣಿಕಂಠನ್‌ ʼಕಡೈಸಿ ವಿವಸಾಯಿʼ ಸಿನಿಮಾಗೆ ಅತ್ಯುತ್ತಮ ಚಲನಚಿತ್ರ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ.