Home » ಕಾರ್ಕಳ: ಬೈಕ್ ನಲ್ಲಿ ತೆರಳುತ್ತಿದ್ದ ಮಹಿಳೆ ಛತ್ರಿ ಬಿಡಿಸುವಾಗ ಆಯತಪ್ಪಿ ಬಿದ್ದು ಸಾವು

ಕಾರ್ಕಳ: ಬೈಕ್ ನಲ್ಲಿ ತೆರಳುತ್ತಿದ್ದ ಮಹಿಳೆ ಛತ್ರಿ ಬಿಡಿಸುವಾಗ ಆಯತಪ್ಪಿ ಬಿದ್ದು ಸಾವು

0 comments

ಕಾರ್ಕಳ: ಬೈಕ್ ನಲ್ಲಿ ತೆರಳುತ್ತಿರುವಾಗ ಜೋರಾಗಿ ಗಾಳಿ ಮಳೆ ಬಂದ ಕಾರಣ, ಹಿಂಬದಿಯಲ್ಲಿ ಕುಳಿತಿದ್ದ ಮಹಿಳೆ ಛತ್ರಿ ಬಿಡಿಸಿದಾಗ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ರೆಂಜಾಳ ಗ್ರಾಮದ ನೆಲ್ಲಿಕಾರು ರಸ್ತೆಯ ಮುಗೇರ್ಕಳ ಎಂಬಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಗಂಗಮ್ಮ ಎಂದು ಗುರುತಿಸಲಾಗಿದೆ.

ಪ್ರವೀಣ ಎಂಬುವವರು ತಮ್ಮ ಬೈಕ್ ನಲ್ಲಿ ಗಂಗಮ್ಮ ಎಂಬವವರನ್ನು ಕುಳ್ಳಿರಿಸಿಕೊಂಡು ಪಾಜಾಲು ಕಡೆಗೆ ಹೋಗುತ್ತಿದ್ದ ವೇಳೆ, ಜೋರು ಗಾಳಿ ಮಳೆ ಬಂದಿದೆ. ಹೀಗಾಗಿ ಹಿಂಬದಿ ಕುಳಿತಿದ್ದ ಗಂಗಮ್ಮ, ಛತ್ರಿ ಬಿಡಿಸಿದ್ದಾರೆ. ಈ ವೇಳೆ ಗಾಳಿಯ ಸೆಳೆತಕ್ಕೆ ಬೈಕ್ ಪಲ್ಟಿಯಾಗಿ ಮಹಿಳೆಯ ತಲೆ ರಸ್ತೆಗೆ ಬಡಿದಿದೆ.

ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ
ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಘಟನೆ ನಿನ್ನೆ ಸಂಜೆ ವೇಳೆ ನಡೆದಿದ್ದು, ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

banner

You may also like

Leave a Comment