Home » ಬಟ್ಟೆ ಬಿಚ್ಚಮ್ಮ ಭಸ್ಮ ಹಾಕುತ್ತೇನೆ – ಬೆಂಗಳೂರಲ್ಲಿ ಯುವತಿಗೆ ಸ್ವಾಮಿಜಿ ಕಾಟ!!

ಬಟ್ಟೆ ಬಿಚ್ಚಮ್ಮ ಭಸ್ಮ ಹಾಕುತ್ತೇನೆ – ಬೆಂಗಳೂರಲ್ಲಿ ಯುವತಿಗೆ ಸ್ವಾಮಿಜಿ ಕಾಟ!!

0 comments

ಭಾರತೀಯ ಸಂಪ್ರದಾಯದಲ್ಲಿ ಕಾವಿಧಾರಿಗಳಿಗೆ ತನ್ನದೇ ಆದ ಮಹತ್ವವಿದೆ. ಆದರೆ ಇಂದು ಅನೇಕ ನಕಲಿ ಕಾವಿಧಾರಿಗಳು ಹುಟ್ಟಿಕೊಂಡು ಅದರ ಮಹತ್ವವನ್ನು ಹಾಳು ಮಾಡುತ್ತಿದ್ದಾರೆ. ಇದೀಗ ಬೆಂಗಳೂರಿನಲ್ಲಿ ಒಬ್ಬ ವಿಚಿತ್ರ ಕಾಮಿ ಸ್ವಾಮಿ ಪ್ರತ್ಯಕ್ಷವಾಗಿದ್ದು ಯುವತಿಗೆ ಬಟ್ಟೆ ಬಿಚ್ಚಮ್ಮ, ಭಸ್ಮಹಾಕುತ್ತೇನೆ ಎಂದು ದುಂಬಾಲು ಬಿದ್ದ ಘಟನೆ ನಡೆದಿದೆ. ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ವೈ ನಲ್ಲಿ ಈ ಘಟನೆ ಸಂಭವಿಸಿದೆ. ವೈರಲ್ ಆಗಿರುವ ವಿಡಿಯೋವನ್ನು ಯುವತಿಯೇ ರೆಕಾರ್ಡ್ ಮಾಡಿದ್ದಾಳೆ. ಅದರಲ್ಲಿ ಕಾವಿ ಧರಿಸಿದ ಯುವ ಸ್ವಾಮೀಜಿಯೊಬ್ಬನನ್ನು ಕಾಣಬಹುದು. ಜೊತೆಗೆ ಒಬ್ಬಳು ಯುವತಿ ಸ್ವಾಮಿಜಿ ಅಸಹ್ಯ ರೀತಿ ಬೇಡಿಕೆ ಇಟ್ಟ ಬಗ್ಗೆ ಕಾಕಿ ಧರಿಸಿರುವ ಡ್ರೈವರ್ ಯುವಕನ ಬಳಿ ದೂರುತ್ತಿರುವುದನ್ನು ಕೂಡ ನೋಡಬಹುದು. ಯುವತಿಯ ಮಾತನ್ನು ಕೇಳಿ ಸಿಟ್ಟಾದ ಯುವಕ ಕಾವಿ ಧರಿಸಿರುವ ಸ್ವಾಮೀಜಿಗೆ ಹೊಡೆಯಲು ಹೋಗುವದು ಕೂಡ ರೆಕಾರ್ಡ್ ಆಗಿದೆ. 

ಸ್ವಾಮೀಜಿ ಬಗ್ಗೆ ದೂರವಾ ಯುವತಿ ಆರಂಭದಲ್ಲಿ ಹಿತ ಮನೆಯ ಬಳಿ ಬಂದು ಭಿಕ್ಷೆ ಕೇಳಿದ. 50 ರೂಪಾಯಿ ಹಾಕಿದೆ. ನಂತರ ಏನೋ ಪೂಜೆ ಎಂದು ಹೇಳಿದಕ್ಕೆ ಸಾವಿರ ರೂಪಾಯಿಯನ್ನು ಕೊಟ್ಟೆ. ಹೀಗೆ ಮುಂದುವರೆಯುತ್ತಾ ತಾಯಿಯ ಗರ್ಭದಿಂದ ಹೊರ ಬರುವಾಗ ಹೇಗಿರುತ್ತೇಯೋ? ಅರ್ಥಾತ್ ಬೆತ್ತಲೆಯಾಗಿ ನಿಂತುಕೋ, ಅಲ್ಲಿಗೆ ಭಸ್ಮ ಹಾಕಬೇಕು ಎಂದು ಬೇಡಿಕೆ ಇಟ್ಟ. ಆಗ ಇವನ ನಿಜ ಬಣ್ಣ ಬಯಲಾಯಿತು ಎಂದು ದೂರುವುದನ್ನು ನೋಡಬಹುದು. 

ಅದಕ್ಕೆ ಕಾವಿ ಸ್ವಾಮೀಜಿ ನಾನು ಎಲ್ಲರ ಬಳಿಯೂ ಹಾಗೆ ಹೇಳುವುದಿಲ್ಲ. ನನ್ನ ಅಕ್ಕ ತಂಗಿಯ ತಂದುಕೊಂಡು ನಾನು ಹಾಗೆ ಹೇಳಿದೆ. ತಪ್ಪಾಯಿತು ಎನ್ನುತ್ತಾನೆ. ಇದಕ್ಕೆ ಇವತ್ತು ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ಗೆ ಹಾಕುತ್ತೇನೆ ಎಲ್ಲಾ ಮಹಿಳೆಯರು ಇದನ್ನು ನೋಡಿ ಯಾರು ಹುಡುಗ ನನ್ನ ಮನೆಯ ಬಳಿ ಸೇರಿಸಬೇಡಿ ಎಂದು ಹೇಳುತ್ತಾಳೆ.

banner

Vidio👇

https://www.instagram.com/reel/DZErfTMMJZV/?igsh=MTFrazAxendsNHdlbQ==

You may also like