Hubballi : ನಮ್ಮ ಸಮಾಜದಲ್ಲಿ ಲವ್ ಜಿಹಾದ್ ಒಂದು ದೊಡ್ಡ ಪಿಡುಗಾಗಿ ಪರಿಣಮಿಸಿದೆ. ಲವ್ ಜಿಹಾದ್ ನಿಂದ ಮುಕ್ತಿ ಪಡೆಯಲು ಸರ್ಕಾರವು ಹೊಸ ಕಾನೂನುಗಳನ್ನು ರೂಪಿಸಬೇಕೆಂದು ಹಿಂದೂ ಪರ ಸಂಘಟನೆಗಳು ಒತ್ತಾಯ ಹೇರಿದರೂ ಕೂಡ ಇದುವರೆಗೂ ಯಾವುದೇ ಪ್ರಯೋಜನ ಆಗಿಲ್ಲ. ಅನೇಕ ಯುವತಿಯರು ಈ ಬಲೆಗೆ ಸಿಲುಕಿ ತಮ್ಮ ಜೀವನವನ್ನೇ ನಾಶ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಹುಬ್ಬಳ್ಳಿಯಲ್ಲಿ ಇಂತಹ ಪ್ರಕರಣಗಳು ಬೆಳಕಿಗೆ ಬಂದಿದ್ದು, ಕೆಲವು ಯುವತಿಯರು ಲವ್ ಜಿಹಾದ್ ನಿಂದ ಪಾರಾಗಿ ಅಲ್ಲಿನ ಭಯಾನಕ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.

ಹೌದು, ಹುಬ್ಬಳ್ಳಿಯಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದ ಕೆಲವು ಯುವತಿಯರು ತಾವು ಹೇಗೆ ಲವ್ ಜಿಹಾದ್ ಬಲೆಯಲ್ಲಿ ಬಿದ್ದೆವು. ಅದರಿಂದ ಪಾರಾಗಿ ಬಂದಿದ್ದು ಹೇಗೆ ಅಂತ ನೋವು ತೋಡಿಕೊಂಡಿದ್ದಾರೆ. ಉಮ್ಮಳಿಸಿ ಬರ್ತಿರೋ ದುಖವನ್ನು ಸಹಿಸಿ ತಮಗಾದ ನೋವನ್ನು ಹಂಚಿಕೊಂಡಿದ್ದಾರೆ. ಅವರು ಹೇಳಿದ ಭಯಾನಕ ಸತ್ಯಗಳನ್ನು ತಿಳಿದರೆ ನಿಜಕ್ಕೂ ಶಾಕ್ ಆಗುತ್ತೆ.
ತಮಗೆ ಪರಿಚಯವಾದ ಅನ್ಯ ಧರ್ಮೀಯರು, ನನ್ನನ್ನು ಮದುವೆಯಾದರೆ ನೀನು ಮತಾಂತರವಾಗೋ ಅವಶ್ಯಕತೆಯಿಲ್ಲ. ಬುರ್ಖಾ ಹಾಕೋದು ಕೂಡ ಇಲ್ಲ. ನೀನು ರಾಣಿಯಂತೆ ಚೆನ್ನಾಗಿರ್ತಿಯಾ ಅಂತ ಹೇಳಿ ಮನಸು ಕೆಡಿಸುತ್ತಿದ್ದರು. ನಮ್ಮ ಹೆತ್ತವರನ್ನು, ನಮ್ಮ ಮನೆಯವರನ್ನು ನಾವೇ ದ್ವೇಷಿಸುವಂತೆ ಬಣ್ಣದ ಮಾತುಗಳನ್ನು ಹೇಳ್ತಿದ್ದರು. ಆದರೆ ನಂತರ ಗೊತ್ತಾಗಿದ್ದು, ಹೇಳಿದ್ದೆಲ್ಲಾ ಬಣ್ಣದ ಮಾತುಗಳು ಅಂತ. ಹೀಗಾಗಿ ಲವ್ ಜಿಹಾದ್ ಬಲೆಯಿಂದ ಪಾರಾಗಿ ಬಂದರು ಅಂತ ತಮ್ಮೋ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ.
ಇನ್ನು ಹುಬ್ಬಳ್ಳಿಯಲ್ಲಿ ಈ ಹಿಂದೆ ಕಾಲೇಜು ಕ್ಯಾಂಪಸ್ನಲ್ಲಿ ಹತ್ಯೆಯಾದ ನೇಹಾ ಹಿರೇಮಠ ತಂದೆ ನಿರಂಜನ ಹಿರೇಮಠ ಕೂಡ ಭಾಗಿಯಾಗಿದ್ದರು. ಲವ್ ಜಿಹಾದ್ ವ್ಯವಸ್ಥಿತವಾಗಿ ನಡೆಯುತ್ತಿದೆ. ತಮ್ಮ ಮಗಳನ್ನು ಕೊಂದವರಿಗೆ ಇಂದು ಜೈಲಿನಲ್ಲಿ ವಿವಿಐಪಿ ಆತಿಥ್ಯ ಸಿಗ್ತಿದೆ. ಅವರಿಗೆ ಬಿರಿಯಾನಿ ಕೊಡ್ತಿದ್ದಾರೆ. ನೇಹಾ ಹಿರೇಮಠ ಹತ್ಯೆಯಾದಾಗ ಮನೆಗೆ ಅನೇಕ ರಾಜಕಾರಣಿಗಳು ಬಂದು ನೂರು ದಿನದಲ್ಲಿ ನ್ಯಾಯ ಕೊಡಿಸ್ತೇವೆ ಅಂತ ಹೇಳಿದ್ರು. ಆದರೆ ಎರಡು ವರ್ಷವಾದರೂ ಕೂಡ ನ್ಯಾಯ ಸಿಕ್ಕಿಲ್ಲ. ಆರೋಪಿ ಬೆನ್ನಿಗೆ ಅನೇಕರು ನಿಂತಿದ್ದಾರೆ ಎಂದು ತಮ್ಮ ಅಲಳನ್ನು ತೋಡಿಕೊಂಡರು.

