Home latest BIGG NEWS: ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ | ಅಡುಗೆ ತೈಲ ಬೆಲೆ ಮತ್ತಷ್ಟು ಇಳಿಕೆ!!!

BIGG NEWS: ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ | ಅಡುಗೆ ತೈಲ ಬೆಲೆ ಮತ್ತಷ್ಟು ಇಳಿಕೆ!!!

Hindu neighbor gifts plot of land

Hindu neighbour gifts land to Muslim journalist

ಇತ್ತೀಚೆಗಷ್ಟೇ ಹಾಲಿನ ದರ ಏರಿಕೆಯ ನಡುವೆ ತೈಲ ದರ ಏರಿಕೆಯಾಗಿ ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿತ್ತು. ಇದೀಗ, ಗಣಿ ತೈಲಗಳ ಬೆಲೆ ಇಳಿಕೆಯಾಗಿ ಸಾಮಾನ್ಯ ಜನತೆಗೆ ಕೊಂಚ ಮಟ್ಟಿಗಾದರೂ ನಿಟ್ಟುಸಿರು ಬಿಡುವಂತಾಗಿದೆ.

ದೇಶದಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಹಣದುಬ್ಬರದ ನಡುವೆ ಸಾಮಾನ್ಯ ಜನರಿಗೆ ಸಿಹಿ ಸುದ್ದಿ ದೊರೆತಿದ್ದು, ಗಣಿ ತೈಲದ ಬೆಲೆಗಳು ತೀವ್ರವಾಗಿ ಕುಸಿತ ಕಂಡಿವೆ. ದೇಶದಲ್ಲಿ ಸೋಯಾಬೀನ್ ಮತ್ತು ಸೂರ್ಯಕಾಂತಿ ಎಣ್ಣೆಯ ಆಮದಿನ ಹೆಚ್ಚಳದ ನಿರೀಕ್ಷೆಗಳಿಂದಾಗಿ ಕಳೆದ ವಾರ ದೆಹಲಿಯ ತೈಲ-ಎಣ್ಣೆಕಾಳುಗಳ ಮಾರುಕಟ್ಟೆಯಲ್ಲಿನ ಬಹುತೇಕ ಎಲ್ಲಾ ತೈಲ-ಎಣ್ಣೆಕಾಳುಗಳ ಬೆಲೆಗಳಲ್ಲಿನ ಕುಸಿತದಿಂದಾಗಿ ಈ ಕುಸಿತ ಸಂಭವಿಸಿದೆ ಎನ್ನಲಾಗಿದೆ.

ಇದರ ಜೊತೆಗೆ ತೈಲ-ಎಣ್ಣೆಕಾಳುಗಳ ಬೆಲೆಗಳ ಮೇಲಿನ ಕುಸಿತ ಕಂಡ ಪರಿಣಾಮವಾಗಿ ಖಾದ್ಯ ತೈಲವು 50 ರೂ.ಗಳಷ್ಟು ಅಗ್ಗವಾಗಿ ಜನರಿಗೆ ದರ ಏರಿಕೆಯ ಬಿಸಿ ಕೊಂಚ ಮಟ್ಟಿಗೆ ಇಳಿದಿದೆ. ಈ ಕುಸಿತದ ನೆಲಗಡಲೆ ಎಣ್ಣೆ ಬೀಜಗಳು, ಸಿಪಿಒ ಮತ್ತು ಹತ್ತಿ ಬೀಜಗಳ ತೈಲ ಬೆಲೆಗಳು ಇಳಿಕೆಯಾಗಿದೆ.

ಮತ್ತೊಂದೆಡೆ, ಸಾಸಿವೆ ಎಣ್ಣೆ-ಎಣ್ಣೆಕಾಳು ಮತ್ತು ಹತ್ತಿಬೀಜದ ಎಣ್ಣೆ ಬೆಲೆಗಳು ಪ್ರತಿಕೂಲ ಮಾರುಕಟ್ಟೆಯ ಜೊತೆಗೆ ಮದುವೆಗಳಲ್ಲಿ ಹೆಚ್ಚಿದ ಬೇಡಿಕೆಯಿಂದಾಗಿ ಸುಧಾರಣೆ ಕಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹತ್ತಿಬೀಜದ ತೈಲದ ಬೆಲೆಗಳು ಕಡಿಮೆಯಾಗಿವೆ.

ಇದರಿಂದಾಗಿ ರೈತರು ಕಡಿಮೆ ಬೆಲೆಗೆ ಮಾರಾಟ ಮಾಡುವುದನ್ನ ತಪ್ಪಿಸಲು ಮಂಡಿಗಳಿಗೆ ಕಡಿಮೆ ಸರಕುಗಳನ್ನು ತರುತ್ತಿದ್ದಾರೆ. ಹೀಗಾಗಿ ಬೆಲೆ ಇಳಿಕೆ ಜನರ ಪಾಲಿಗೆ ಅಲ್ಪ ಮಟ್ಟಿಗೆ ಸಮಾಧಾನ ತರಲಿದೆ.