

Maharastra : ಮಹಾರಾಷ್ಟ್ರದಲ್ಲಿ 2ಕ್ಕಿಂತ ಹೆಚ್ಚು ಮಕ್ಕಳಿದ್ರೆ ಸ್ಥಳೀಯ ಸಂಸ್ಥೆ ಚುನಾವಣೆಗೆ ಸ್ಪರ್ಧಿಸುವುದಕ್ಕೆ ಆಗಲ್ಲ ಎಂದು 3 ಮಕ್ಕಳ ತಂದೆಯೊಬ್ಬ ತನ್ನದೇ ಮಗುವನ್ನು ಕೊಂದ ಆಘಾತಕಾರಿ ಘಟನೆ ನಡೆದಿದೆ.
ಮಹಾರಾಷ್ಟ್ರದಲ್ಲಿ ಈ ವರ್ಷದ ಜೂನ್ನಲ್ಲಿ ಗ್ರಾಮದಲ್ಲಿ ನಡೆಯುವ ಸ್ಥಳೀಯ ಸಂಸ್ಥೆ ಚುನಾವಣೆಗೆ ನಿಲ್ಲುವವರಿಗೆ ಅಲ್ಲಿನ ನಿಯಮ ಪ್ರಕಾರ ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಆದರೆ ನಾಂದೇಡ್ನ ಕೆರೂರು ಗ್ರಾಮದಲ್ಲಿ ವಿರಾಟ್ ಸಲೂನ್ ನಡೆಸುತ್ತಿದ್ದ ಪಾಂಡುರಂಗ ಕೊಂಡಮಂಗಲೆ ( 28) ಎಂಬಾತನಿಗೆ 1 ಗಂಡು, 2 ಹೆಣ್ಣುಮಕ್ಕಳು. ಗ್ರಾಮದ ಸರಪಂಚ್ ಆಗೋ ದುರಾಸೆಗೆ ಬಿದ್ದ ಈತ ಹಾಲಿ ಸರಪಂಚ್ ಬಳಿ ಸಲಹೆ ಪಡೆದು, ಆರಂಭದಲ್ಲಿ ಹಿರಿ ಮಗಳನ್ನು ದತ್ತು ನೀಡುವ ಬಗ್ಗೆ ಚಿಂತಿಸಿದ್ದಾರೆ.
ಆದರೆ ನಂತರ ಕೊಲೆ ಮಾಡುವುದೇ ಬೆಸ್ಟ್ ಎಂದು ಸ್ಕೆಚ್ ರೂಪಿಸಿದ್ದಾರೆ. ಅದರಂತೆ ಮಗಳನ್ನು ನಿಜಾಮಾಬಾದ್ಗೆ ಬೈಕ್ನಲ್ಲಿ ಪ್ರವಾಸಕ್ಕೆಂದು ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಪಾಪಿ ತಂದೆ ಗದ್ದೆಯಲ್ಲಿದ್ದ ನೀರಿಗೆ ಬಾಲಕಿ ತಳ್ಳಿ ಓಡಿದ್ದಾನೆ. ಮಗುವಿನ ದೇಹ ಕಾಲುವೆಯಲ್ಲಿ ತೇಲುತ್ತಿರುವುದಿಂದ ಗ್ರಾಮಸ್ಥರು ನೋಡಿ ಪೊಲೀಸರಿಗೆ ವಿಚಾರ ಮುಟ್ಟಿಸಿದಾಗ ಘಟನೆ ಬೆಳಕಿಗೆ ಬಂದಿದೆ.













