Home » Renukaswamy Case: ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್ – ಪೊಲೀಸ್ ತನಿಖೆಯೇ ಸುಳ್ಳು ?

Renukaswamy Case: ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್ – ಪೊಲೀಸ್ ತನಿಖೆಯೇ ಸುಳ್ಳು ?

0 comments

Renukaswamy Case: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತನಕ್ಕೊಳಗಾಗಿರುವ ಮೂರನೇ ಆರೋಪಿ ಪುಟ್ಟಸ್ವಾಮಿ ಅಲಿಯಾಸ್‌ ಪವನ್‌ ಸೇರಿ ಇತರೆ ಆರೋಪಿಗಳಿಂದ ಮೊಬೈಲ್‌ಗ‌ಳನ್ನು ವಶಪಡಿಸಿಕೊಂಡಿರುವ ಸ್ಥಳದ ಬಗ್ಗೆ ಪೊಲೀಸರು ಸುಳ್ಳು ದಾಖಲೆ ಸೃಷ್ಟಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣದ A2 ಪರ ವಕೀಲರು ಸಲ್ಲಿಸಿದ್ದ ಅರ್ಜಿಗೆ ಇಂದು ಎಸ್ ಪಿ‌ಪಿ ಅಕ್ಷೇಪಣೆ ಸಲ್ಲಿಕೆ ಮಾಡಲಿದ್ದಾರೆ. ಕೊಲೆ ಪ್ರಕರಣದ ಆರೋಪಿಗಳ ಮೊಬೈಲ್ ಸೀಜ್ ಮಾಡೊರುವುದೇ ಬೇರೆ ಸ್ಥಳದಲ್ಲಿ. ಆದ್ರೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಸೀಜ್‌ ಮಾಡಿರುವುದಾಗಿ ಉಲ್ಲೇಖ ಮಾಡಿದ್ದಾರೆ. ಈ ಸುಳ್ಳು ದಾಖಲೆ ಸೃಷ್ಟಿಸಿದ ಆರೋಪದ ಮೇರೆಗೆ ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಯ ಅಂದಿನ ಇನ್ಸ್ ಪೆಕ್ಟರ್‌ ಸಿ. ಗಿರೀಶ್‌ ನಾಯ್ಕ ಅವರನ್ನು ಆರೋಪಿಯನ್ನಾಗಿ ಮಾಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ಅಲ್ಲದೆ, ಸುಳ್ಳು ದಾಖಲೆ ಸೃಷ್ಟಿಸಿದ ಸ್ಥಳವನ್ನು ನ್ಯಾಯಾಧೀಶರು ಖುದ್ದು ಪರಿಶೀಲನೆ ನಡೆಸಬೇಕು ಮತ್ತು ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ನ್ಯಾಯಾಲಯದ ಸುಪರ್ದಿಗೆ ಪಡೆದು ಸಂರಕ್ಷಿಸಬೇಕು ಎಂದು ಅರ್ಜಿ ಯಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಬಂಧ ನ್ಯಾಯಾಲಯ ಸಿಸಿ ಕ್ಯಾಮೆರಾ ದೃಶ್ಯಾವಳಿಗಳ ರಕ್ಷಣೆಗೆ ಕ್ರಮಕೈಗೊಂಡಿದೆ. ಪ್ರಕರಣದ ಆರಂಭಿಕ ತನಿಖಾಧಿಕಾರಿಯಾಗಿದ್ದ ಕಾಮಾಕ್ಷಿಪಾಳ್ಯ ಠಾಣೆಯ ಅಂದಿನ ಇನ್ಸ್‌ಪೆಕ್ಟರ್‌ ಗಿರೀಶ್‌ ನಾಯ್ಕ ಪ್ರಕರಣದಲ್ಲಿ ದೋಷಾರೋಪ ಪಟ್ಟಿಯ ಭಾಗವಾಗಿರುವ ಅನೇಕ ಪ್ರಮುಖ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದರು. 3ನೇ ಆರೋಪಿ ಪುಟ್ಟಸ್ವಾಮಿಯಿಂದ ಕೆಲ ಮೊಬೈಲ್‌ಗ‌ಳನ್ನು ವಶಪಡಿಸಿಕೊಳ್ಳಲಾಗಿದ್ದು, ಆದರೆ, ಮೊಬೈಲ್‌ಗ‌ಳನ್ನು ವಶಪಡಿಸಿಕೊಳ್ಳುವಾಗ ತೆಗೆಯಲಾದ ಫೋಟೋಗಳು, ಪೊಲೀಸರು ನ್ಯಾಯಾಲಯಕ್ಕೆ ನೀಡಿರುವ ಫೋಟೋಗಳಲ್ಲಿ ಠಾಣೆಯ ನೆಲವು ಬಿಳಿ ಬಣ್ಣದ ವಿಟ್ರಿಫೈಡ್‌ ಟೈಲ್ಸ್‌ನಿಂದ ಕೂಡಿದೆ. ಆದರೆ, ವಾಸ್ತವದಲ್ಲಿ ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಯ ನೆಲವು ಬೂದು ಬಣ್ಣದ ಮೊಸಾ ಯಿಕ್‌ ಟೈಲ್ಸ್‌ನಿಂದ ಕೂಡಿದೆ. ಫೋಟೋದಲ್ಲಿ ಕಂಡುಬರುವ ಕಟ್ಟಡದ ರಚನೆಗೂ ಮತ್ತು ಅಸಲಿ ಪೊಲೀಸ್‌ ಠಾಣೆಯ ರಚನೆಗೂ ಯಾವುದೇ ಸಾಮ್ಯತೆ ಇಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. 

ಮಾಧ್ಯಮಗಳ ಜೊತೆಗೆ ಮಾತನಾಡಿದ ಎ೩ ಪವನ್ ಪರ ವಕೀಲ ಸುಧನ್ವ ಕೆಲವೊಂದು ವಿಚಾರವನ್ನು ಹಂಚಿಕೊಂಡಿದ್ದಾರೆ. ನಮ್ಮ ಕಕ್ಷಿದಾರರೆ ಮಾಹಿತಿ ಕೊಟ್ಟಿದ್ದರು. ನಂತರ ನಮ್ಮ ವಕೀಲರು ಸ್ಟೇಷನ್ ಗೆ ಹೋಗಿ ಪರಿಶೀಲನೆ ನಡೆಸಿದಾಗ ವ್ಯತ್ಯಾಸ ಕಂಡು ಬಂತು.ಜೊತೆಗೆ ಮಹಜರು ಪೋಟೊದಲ್ಲಿ ಟೈಲ್ಸ್ ವ್ಯತ್ಯಾಸ ಇದೆ. ಇದು ಪೊಲೀಸರು ಮಿಸ್ಟೆಕ್ ನಿಂದ ಮಾಡಿರೋದಲ್ಲ. ಪೊಲೀಸರು ಉದ್ದೇಶ ಪೂರ್ವಕವಾಗಿ ಮಾಡಿರುವುದು. ಹೀಗಾಗಿ ಇದು ಕೇಸ್ ವಿಚಾರಣೆ ಮೇಲೆ ಪರಿಣಾಮ ಬೀರುತ್ತೆ.ಹೀಗಾಗಿ ತನಿಖಾಧಿಕಾರಿ ಮೇಲೆ ಕ್ರಮ ಆಗಬೇಕು. ಹಾಗೂ ನ್ಯಾಯಾಧೀಶರು ಖುದ್ದಾಗಿ ಭೇಟಿ ನೀಡಬೇಕು ಅಂತಾ ಅರ್ಜಿ ಹಾಕಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ.

banner

You may also like