

Rakshith Shetty : ಬಿಗ್ಬಾಸ್ ಕನ್ನಡ ಸೀಸನ್ 12ರಲ್ಲಿ ರನ್ನರ್ ಅಪ್ ಆಗಿದ್ದ ರಕ್ಷಿತಾಗೆ, ಈ ಹಿಂದೆ ಸ್ಪರ್ಧಿಯಾಗಿ ಭಾಗವಹಿಸಿದ್ದ ವರ್ತೂರ ಸಂತೋಷ್ ಅವರು 2 ಲಕ್ಷ ರೂಪಾಯಿ ನಗದು ಬಹುಮಾನ ನೀಡುವುದಾಗಿ ಘೋಷಿಸಿದ್ದರು. ತಮ್ಮ ಮಾತಿನಂತೆ ಅವರು ಹಣ ನೀಡಲು ರಕ್ಷಿತಾ ಶೆಟ್ಟಿ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ರಕ್ಷಿತಾ ನನಗೆ ಎರಡು ಲಕ್ಷ ಹಣ ಬೇಡ, ಅದರ ಬದಲು ಎರಡು ಹಸುವನ್ನು ಕೊಡಿ ಎಂದು ಕೇಳಿಕೊಂಡಿದ್ದಾರೆ.
ಹೌದು, ರಕ್ಷಿತಾ ಅವರು ಹಣದ ಬದಲು ತಮ್ಮಲ್ಲಿರುವ ಎರಡು ಹಳ್ಳಿಕಾರ್ ಹಸುಗಳನ್ನೇ ನೀಡುವಂತೆ ವರ್ತೂರ್ ಸಂತೋಷ್ ಬಳಿ ಮನವಿ ಮಾಡಿದ್ದಾರೆ ಎನ್ನಲಾಗಿದ್ದು, ಅದರಂತೆ ವರ್ತೂರ್ ಸಂತೋಷ್ ಅವರು ಈಗ ರಕ್ಷಿತಾ ಅವರಿಗೆ ಎರಡು ಹಸುಗಳನ್ನು ನೀಡುವುದಕ್ಕೆ ಮುಂದಾಗಿದ್ದಾರೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಅಂದಹಾಗೆ ಫಿನಾಲೆ ವೇದಿಕೆಯಲ್ಲಿ ಸ್ಪರ್ಧಿಗಳು ಗೆದ್ದ ಹಣವನ್ನು ಏನು ಮಾಡುತ್ತಾರೆ ಎಂಬ ಪ್ರಶ್ನೆಗೆ, ರಕ್ಷಿತಾ ಅವರು ಹಸುಗಳನ್ನು ಖರೀದಿಸಿ ಸಾಕುವ ಆಸೆ ಹೊಂದಿರುವುದಾಗಿ ಹೇಳಿದ್ದರು ಎನ್ನಲಾಗುತ್ತಿದೆ. ಅದೇ ಹಿನ್ನೆಲೆ ಈ ಸುದ್ದಿ ವೈರಲ್ ಆಗಿದೆ. ಅನೇಕರು ರಕ್ಷಿತಾ ಅವರು ಇದೇ ಕಾರಣಕ್ಕೆ ನಮಗೆ ಇಷ್ಟವಾಗುತ್ತಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಕೆಲ ಮಾಹಿತಿಗಳ ಪ್ರಕಾರ ಇದೊಂದು ಫೇಕ್ ನ್ಯೂಸ್ ಎಂದು ವರದಿಯಾಗಿದೆ.













