HomeBreaking Entertainment News Kannadaಸುದೀಪ್ ಹೆಸರು ಹೇಳಿ ಕ್ರಾಂತಿ ಮಾಡಿದ ದರ್ಶನ್ | ದರ್ಶನ್ ಬಾಯಲ್ಲಿ ಸುದೀಪ್ ರಾಗ…

ಸುದೀಪ್ ಹೆಸರು ಹೇಳಿ ಕ್ರಾಂತಿ ಮಾಡಿದ ದರ್ಶನ್ | ದರ್ಶನ್ ಬಾಯಲ್ಲಿ ಸುದೀಪ್ ರಾಗ…

Hindu neighbor gifts plot of land

Hindu neighbour gifts land to Muslim journalist

ದರ್ಶನ್‌ ಅಭಿನಯದ ‘ಕ್ರಾಂತಿ’ ಸಿನಿಮಾ ಜನವರಿ 26 ರಂದು ತೆರೆ ಕಾಣಲು ಸಜ್ಜಾಗಿದ್ದೂ, ಬಿಡುಗಡೆಗಾಗಿ ಸಿನಿಮಾಭಿಮಾನಿಗಳು ಕಾದು ಕುಳಿತಿದ್ದಾರೆ. ಈ ಮಧ್ಯೆ ಸಿನಿಮಾದ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿರುವ ದರ್ಶನ್‌ ಚಿತ್ರದ ಪ್ರಚಾರದ ವೇಳೆ ಮೊದಲ ಬಾರಿಗೆ ದರ್ಶನ್‌ ಬಾಯಿಯಲ್ಲಿ ಸುದೀಪ್‌ ಹೆಸರು ಕೇಳಿಬಂದಿದೆ!!

ಹೌದು, ಕಿಚ್ಚ ಸುದೀಪ್ ಹಾಗೂ ದರ್ಶನ್ ತೂಗುದೀಪ್ ಕನ್ನಡ ಚಿತ್ರರಂಗದ ಮೇರು ನಟರು. ಇಬ್ಬರಿಗೂ ಅವರದ್ದೇಯಾದ ಅಭಿಮಾನಿಗಳ ದಂಡೇ ಇದೆ. ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ರಾಂತಿ ಚಿತ್ರದ ಬಗ್ಗೆ ಮೀಡಿಯಾ ಒಂದಕ್ಕೆ ನೀಡಿದ ಸಂದರ್ಶನದ ವೇಳೆ ಅಭಿನಯ ಚಕ್ರವರ್ತಿ ಕಿಚ್ಚಾ ಸುದೀಪ್ ಬಗ್ಗೆ ಮಾತನಾಡಿದ್ದು, ಎಲ್ಲೆಡೆ ಈ ಮಾತುಗಳು ಸಖತ್ ವೈರಲ್ ಆಗುತ್ತಿದೆ.

ರಚಿತಾ ರಾಮ್‌ ಬಗ್ಗೆ ನಿರೂಪಕ ಕೇಳಿದ ಪ್ರಶ್ನೆಗೆ, ”ಒಬ್ಬ ನಾಯಕಿ ಚಿತ್ರರಂಗದಲ್ಲಿ 10 ವರ್ಷ ಪೂರೈಸುವುದು ಸುಲಭದ ಮಾತಲ್ಲ. ಅದು ನಿಜವಾಗಲೂ ದೊಡ್ಡ ವಿಚಾರ. ರಚಿತಾ ದೊಡ್ಡ ದೊಡ್ಡ ಹೀರೋಗಳ ಜೊತೆ ನಾಯಕಿ ಪಾತ್ರದಲ್ಲಿ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಅಪ್ಪು, ಸುದೀಪ್‌, ಶಿವಣ್ಣ ಹೀಗೆ ಅನೇಕರ ಜೊತೆಗೆ ಕೆಲಸ ಮಾಡಿದ್ದಾರೆ” ಎಂದು ದರ್ಶನ್‌ ಹೇಳುತ್ತಾರೆ. ದರ್ಶನ್ ಅವರ ಈ ಹೇಳಿಕೆ ಎಲ್ಲೆಡೆ ಸುದ್ದಿಯಾಗಿದೆ.

RELATED ARTICLES

Most Popular

Recent Comments