Home Latest Health Updates Kannada ತಾಯಿ ಲಕ್ಷ್ಮಿ ಜೊತೆಗೆ ಶಿವನಿಗೆ ತುಂಬಾ ಪ್ರಿಯವಾದ ಈ ಹೂವನ್ನು ಮನೆಯಲ್ಲಿಟ್ಟರೆ ಅದೃಷ್ಟ ಒಲಿಯುತ್ತೆ

ತಾಯಿ ಲಕ್ಷ್ಮಿ ಜೊತೆಗೆ ಶಿವನಿಗೆ ತುಂಬಾ ಪ್ರಿಯವಾದ ಈ ಹೂವನ್ನು ಮನೆಯಲ್ಲಿಟ್ಟರೆ ಅದೃಷ್ಟ ಒಲಿಯುತ್ತೆ

Hindu neighbor gifts plot of land

Hindu neighbour gifts land to Muslim journalist

ಹೆಸರಲ್ಲಿ ಗಾಂಭಿರ್ಯ ತುಂಬಿದ ಹೂವೇ ಬ್ರಹ್ಮ ಕಮಲ. ಪರಿಮಳದಲ್ಲೂ ಕಮ್ಮಿಯಿಲ್ಲ, ಅಂದದ್ಲಲೂ ಕಮ್ಮಿಯಿಲ್ಲ, ಅದಲ್ಲದೆ ಲಕ್ಷ್ಮೀ ದೇವಿಯ ಪ್ರಿಯವಾದ ಹೂವು ಸಹ ಆಗಿದೆ. ವಾಸ್ತು ಶಾಸ್ತ್ರ ಮತ್ತು ಹಿಂದೂ ಧರ್ಮದಲ್ಲಿ ಅನೇಕ ಸಸ್ಯಗಳು ಮತ್ತು ಹೂವುಗಳನ್ನು ಪವಿತ್ರ ಮತ್ತು ಅದೃಷ್ಟ ಎಂದು ಪರಿಗಣಿಸಲ್ಪಟ್ಟಿದೆ. ಅವುಗಳಲ್ಲಿ ಬ್ರಹ್ಮ ಕಮಲ ಸಹ ಒಂದು.

ಈ ಹೂವಿನ ಹೆಸರು ಬ್ರಹ್ಮ ಕಮಲ ಆದ್ದರಿಂದ ಇದನ್ನು ಬ್ರಹ್ಮ ದೇವರ ಸಂಕೇತವೆಂದು ಪರಿಗಣಿಸಲಾಗಿದೆ. ಈ ಹೂವು ಅರಳುವುದನ್ನು ನೋಡಿದವರಿಗೆ ಜೀವನದಲ್ಲಿ ಸುಖ, ಶಾಂತಿ, ಸಂಪತ್ತು ಸಿಗುತ್ತದೆ ಎಂಬ ನಂಬಿಕೆಯೂ ಇದೆ. ಅಲ್ಲದೆ ಈ ಗಿಡವನ್ನು ಮನೆಯಲ್ಲಿ ನೆಡುವುದರಿಂದ ದುಷ್ಟ ಶಕ್ತಿಗಳು ಮನೆಯೊಳಗೆ ಬರುವುದಿಲ್ಲ ಎಂಬ ಭರವಸೆ ಇದೆ.

ಈ ಹೂವುಗಳು ಸಾಮಾನ್ಯವಾಗಿ ಹಿಮಾಲಯದ ತಗ್ಗುಪ್ರದೇಶಗಳಾದ ರೂಪ್‌ಕುಂಡ್, ಹೇಮಕುಂಡ್, ಕೇದಾರನಾಥ ಇತ್ಯಾದಿ ಪ್ರದೇಶಗಳಲ್ಲಿ ಕಂಡುಬರುತ್ತವೆ ಎಂದು ವಾಸ್ತು ತಜ್ಞರು ಹೇಳುತ್ತಾರೆ.

ವಾಸ್ತು ತಜ್ಞರ ಪ್ರಕಾರ, ಈ ಕಮಲವು ಲಕ್ಷ್ಮಿ ದೇವಿಗೆ ತುಂಬಾ ಪ್ರಿಯವಾಗಿದೆ. ಇದನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಅಥವಾ ಪೂಜೆಯ ಸಮಯದಲ್ಲಿ ಲಕ್ಷ್ಮಿ ದೇವಿಗೆ ಅರ್ಪಿಸುವುದರಿಂದ ಬೇಗನೆ ಸಂತೋಷಪಡುತ್ತಾರೆ ಮತ್ತು ಭಕ್ತರ ಮೇಲೆ ಬಹಳಷ್ಟು ಆಶೀರ್ವಾದವನ್ನು ನೀಡುತ್ತಾರೆ ಎಂದು ನಂಬಲಾಗಿದೆ.

ಅದಲ್ಲದೆ ಶ್ವೇತವರ್ಣದಿಂದ ಕೂಡಿರುವ ಬ್ರಹ್ಮಕಮಲವೂ ಶಿವನಿಗೆ ಪ್ರಿಯವಾದುದು ಆದ್ದರಿಂದ ಇದನ್ನು ಮನೆಯಲ್ಲಿ ಇಡುವುದರಿಂದ ಶಿವ ಮತ್ತು ತಾಯಿ ಲಕ್ಷ್ಮಿ ಇಬ್ಬರ ಆಶೀರ್ವಾದವೂ ಮನೆಯಲ್ಲಿ ಉಳಿಯುತ್ತದೆ ಎಂದು ಬಲವಾಗಿ ನಂಬಲಾಗುತ್ತದೆ.

ಬ್ರಹ್ಮ ಕಮಲ ಹೂವಿನ ಗಿಡವನ್ನು ಮನೆಯಲ್ಲಿ ನೆಟ್ಟರೆ ದುರಾದೃಷ್ಟ ದೂರವಾಗುತ್ತದೆ ಮತ್ತು ಅದೃಷ್ಟ ಬರುತ್ತದೆ ಎಂಬ ನಂಬಿಕೆ ಇದೆ. ವಾಸ್ತು ತಜ್ಞರ ಪ್ರಕಾರ ಈ ಹೂವನ್ನು ಮನೆಯ ಬ್ರಹ್ಮ ಸ್ಥಳದಲ್ಲಿ ಇಡುತ್ತಾರೆ. ಈ ಸಸ್ಯವು ರಸಭರಿತವಾಗಿದ್ದು, ಇದಕ್ಕೆ ಹೆಚ್ಚು ಸೂರ್ಯನ ಬೆಳಕು ಅಗತ್ಯವಿರುವುದಿಲ್ಲ.

ಬ್ರಹ್ಮಕಮಲದ ಬಗ್ಗೆ ಪ್ರಮುಖವಾದ ಒಂದು ನಂಬಿಕೆ ಇದೆ. ಹೌದು ಈ ಹೂವು ಅರಳಿದಂತೆ, ವ್ಯಕ್ತಿಯ ಅದೃಷ್ಟವು ಅರಳುತ್ತದೆ. ಈ ಹೂವನ್ನು ಮನೆಯಲ್ಲಿ ನೆಡುವುದರಿಂದ ವ್ಯಕ್ತಿಯ ಎಲ್ಲಾ ಕೆಟ್ಟ ಕರ್ಮಗಳು ದೂರವಾಗಿ, ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಮತ್ತು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ ಎಂದು ಹಿಂದೂ ಧರ್ಮ ಶಾಸ್ತ್ರದಲ್ಲಿ ತಿಳಿಸಲಾಗಿದೆ.